Wednesday 31 August 2022

Tech Thoughts: How to add background music to a website in html

Tech Thoughts: How to add background music to a website in html: Greetings Of The Day!!! As I told you in my previous blog I was working on designing of a website for an Ashrama. They wanted a backgr...

Sunday 28 August 2022

ಭಾದ್ರಪದ ಮಾಸದ ಕೆಲವು ಮುಖ್ಯ ದಿನಗಳು

 ಭಾದ್ರಪದ ಮಾಸದ ನಿಯಾಮಕ ರೂಪ : ವೃದ್ಧಾ ಹೃಷೀಕೇಶ


ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅಥವಾ ಕೃಷ್ಣ ಪಕ್ಷದ ಪ್ರತಿಪದದಂದು ಪೂರ್ವಾಭಾದ್ರಪದ / ಉತ್ತರ ಭಾದ್ರಪದ ನಕ್ಷತ್ರ ಬರುವುದರಿಂದ ಭಾದ್ರಪದ ಮಾಸ ಎಂದು ಹೆಸರು.


ಪ್ರತಿಪತ್ 28.8.22 - ಭಾಗವತ ಪ್ರೋಷ್ಟಪದಿ ಆರಂಭ

ದ್ವಿತೀಯ 29.8.22 - ಚಂದ್ರದರ್ಶನ ಮಾಡಬೇಕು., ಬಲರಾಮ ಜಯಂತಿ 

ತೃತೀಯ 30.8.22- ಸ್ವರ್ಣಗೌರಿ ವ್ರತ, ಹರತಾಲಿಕಾ ವ್ರತ, ವರಾಹ ಜಯಂತಿ, ತಾಪಸ ಮನ್ವಾದಿ, ಸಾಮಗೋಪಾಕರ್ಮ 

ಚತುರ್ಥಿ 31.8.22 - ಗಣೇಶ ಚತುರ್ಥಿ, ಚಂದ್ರದರ್ಶನ ನಿಷಿದ್ಧ, 

ಪಂಚಮಿ 1.9.22 - ಋಷಿ ಪಂಚಮಿ, 

ಷಷ್ಠಿ 2.9.22 - ಸೂರ್ಯ ಷಷ್ಟಿ, ಭಾಸ್ಕರ ಪೂಜಾ, ಕಾರ್ತಿಕೇಯ ದರ್ಶನ, 

ಸಪ್ತಮಿ 3.9.22 - ಅಮುಕ್ತಾಭರಣ ಸಪ್ತಮಿ, ಜ್ಯೆಷ್ಟಾದೇವಿ ಆವಾಹನೆ

ಅಷ್ಟಮಿ 4.9.22 - ಜ್ಯೇಷ್ಟಾದೇವಿ ಪೂಜಾ, ಶ್ರೀ ಜಗನ್ನಾಥದಾಸರ ಪುಣ್ಯದಿನ (ಮಾನ್ವಿ);  ಶ್ರೀಶ ಪ್ರಾಣೇಶದಾಸರ ಪುಣ್ಯದಿನ (ಕಸಬಾ ಲಿಂಗಸುಗೂರು) 

ನವಮಿ 5.9.22 - ಜ್ಯೇಷ್ಟಾದೇವಿ ವಿಸರ್ಜನೆ, ಜೋರು ಬಂಧನ

6.9.22 ಶ್ರೀ ಸತ್ಯೇಷ್ಟತೀರ್ಥರ ಪುಣ್ಯದಿನ (ಆತಕೂರು)

7.9.22 - ಶ್ರೀ ಪ್ರಸನ್ನವೆಂಕಟದಾಸರ ಪುಣ್ಯದಿನ

ದ್ವಾದಶಿ 8.9.22 - ದಧಿವಾಮನ ಜಯಂತಿ, ಪ್ರದೋಷ 

ಚತುರ್ದಶಿ 9.9.22 - ಅನಂತ ಚತುರ್ದಶಿ

ಹುಣ್ಣಿಮೆ 10.9.22 - ಅನಂತ ಹುಣ್ಣಿಮೆ, ಸನ್ಯಾಸಿಗಳ ಚಾತುರ್ಮಾಸ್ಯ ವ್ರತ ದೀಕ್ಷಾ ಸಮಾಪ್ತಿ, ಯಾದವಾರ್ಯರ ಪುಣ್ಯದಿನ, ಯತಿಗಳ ಸೀಮೋಲ್ಲಂಘನ. ಪ್ರೋಷ್ಟಪದಿ ಭಾಗವತ ಮಂಗಳ


 *ಸೆಪ್ಟೆಂಬರ್ 11ರಿಂದ ಸೆಪ್ಟೆಂಬರ್ 25 ಭಾದ್ರಪದ ಮಾಸದ ಕೃಷ್ಣ ಪಕ್ಷ - ಪಕ್ಷ ಮಾಸ* 

11.9 22 ಮಹಾಲಯ ಪಕ್ಷಾರಂಭ

14.9.22 ಮಹಾಭರಣಿ ಶ್ರಾದ್ಧ

19.9.22 ಅವಿಧವಾನವಮಿ ,


22.9.22 ಯತಿ ಮಹಾಲಯ, 

23.9.22 ಮಘಾ ತ್ರಯೋದಶಿ ಶ್ರಾದ್ಧ

24.9.22 ಘಾತ ಚತುರ್ದಶಿ ಶ್ರಾದ್ಧ

25.9.22 ಮಹಾಲಯ ಅಮಾವಾಸ್ಯೆ,

Saturday 27 August 2022

How do you know you are rich?

 How do you know you are rich?


Amazing answer by an IIT student.  


When I was doing my B Tech, there was a professor who used to teach us ‘Mechanics’.


His lectures used to be very interesting since he had an interesting way to teach and explain the concepts.


One day, in the class, he asked the following questions:


1. What is ZERO?

2. What is INFINITY?

3. Can ZERO and INFINITY be the same?


We all thought that we knew the answers and we replied as follows:


ZERO means nothing.

INFINITY means a number greater than any countable number.


ZERO and INFINITY are opposite and they can never be the same.


He countered us by first talking about infinity and asked, How can there be any number which is greater than any countable number?


We had no answers.


He then explained the concept of infinity in a very interesting way, which I remember even after more than 35 years.


He said that imagine that there is an illiterate shepherd who can count only up to 20.


Now, if the number of sheep he has less than 20 and you ask him how many sheep he has, he can tell you the precise number (like 3, 5 14 etc.).


However, if the number is more than 20, he is likely to say “TOO MANY”.


He then explained that in science infinity means ‘too many’ (and not uncountable) and in the same way zero means ‘too few’ (and not nothing).


As an example, he said that if we take the diameter of the Earth as compared to the distance between Earth and Sun, the diameter of earth can be said to be zero since it is too small.


However, when we compare the same diameter of the earth with the size of a grain, the diameter of earth can be said to be infinite.


Hence, he concluded that the same thing can be ZERO and INFINITE at the same time, depending on the context, or your matrix of comparison.


The relationship between richness and poverty is similar to the relationship between infinity and zero.


It all depends on the scale of comparison with your wants.


If your income is more than your wants, you are rich.


If your wants are more than your income, you are poor.


I consider myself rich because my wants are far less than my income.


I have become rich not so much by acquiring lots of money, but by progressively reducing my wants.


If you can reduce your wants, you too can become rich at this very moment.


May your lives get rich by good thoughts, good deeds, good people around you always.🙏🏽

Why to keep silent while eating

 


ಪಿತೃ ಯಜ್ಞ


 ನಾವು ಯಾಕಾಗಿ ಪಿತೃಪಕ್ಷವನ್ನು ಆಚರಿಸಬೇಕು.. ಯಾಕೆ ಪಿಂಡಪ್ರಧಾನ ಮಾಡುತ್ತೇವೆ ಮತ್ತು  ಬ್ರಾಹ್ಮಣ ಭೋಜನ ದಕ್ಷಿಣೆ ದಾನ ಕೊಡಬೇಕು? ತಿಳಿಯೋಣ.. ಪ್ರತಿಯೊಬ್ಬ ಮಗನ ಕರ್ತವ್ಯ ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು , ಅವರು ನಿಮಗೆ ಅಧಿಕಾರ ,ಅಂತಸ್ತು , ಐಶ್ವರ್ಯ , ಹಣ ಆಸ್ತಿ ಕೊಟ್ಟಿಲ್ಲ  ಎಂದು ಯೋಚಿಸಬೇಡಿ. ಜನ್ಮ ಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು.. ನೀವು ಕೊಟ್ಟ ಅನ್ನ ದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶೃದ್ಧೆಯಿಂದ ಮಾಡಿ . ಅದಕ್ಕೇ ಹೇಳುವದು ಶ್ರದ್ಧೆಯಿಂದ ಮಾಡಿದರೆ ಅದು ಶ್ರಾದ್ಧ. ಭಕ್ತಿಯಿಂದ ಮಾಡಿದರೆ  ಪೂಜಾ  ಫಲ ದೊರೆಯದೇ ಇರದು... ಖಂಡಿತಾ ಫಲವಿಹುದು ವಿಶ್ವಾಸೋ ಫಲದಾಯಕಃ।...


1 ಅಗ್ನೌ ಕರಣೇನ ದೇವಸ್ಥಾಃ.....ಅಂದರೆ ತನ್ನ ಪಿತೃಗಳು ದೇವತೆಗಳಾಗಿ  ದೇವಲೋಕದಲ್ಲಿದ್ದರೆ, ಅವರಿಗೆ ಅಗ್ನೌ ಕರಣಾಕ್ಯ  ಅನ್ನದಿಂದ ತೃಪ್ತಿಯಾಗುತ್ತದೆ..(ಅಗ್ನಿಯಲ್ಲಿ ಹಾಕುವ ಆಹುತಿಗಳಿಂದ.)


2 ಸ್ವರ್ಗಸ್ಥಾಃ  ವಿಪ್ರಭೋಜನೇ.  ತನ್ನ ಪಿತೃಗಳು ಸ್ವರ್ಗದಲ್ಲಿದ್ದರೆ  ಬ್ರಾಹ್ಮಣರ ಭೋಜನ ರೂಪ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ..


3 ಯಮಸ್ಥಾ ಪಿಂಡದಾನೇನ.. .... ತನ್ನ ಪಿತೃಗಳು ಯಮಲೋಕದಲ್ಲಿದ್ದರೆ ,ಪಿಂಡ ಪ್ರಧಾನರೂಪವಾದ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.


4 ನರಕೇ ವಿಕಿರೇಣ ತು...‌.. ತನ್ನ ಪಿತೃಗಳು ನರಕಲೋಕದಲ್ಲಿದ್ದರೆ , ವಿಕಿರಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.


5 ಉಚ್ಛಿಷ್ಟೇನ    ಪಿಶಾಚಾಶ್ಚ....ತನ್ನ ಪಿತೃಗಳು ಪಿಶಾಚಿಗಳಾಗಿದ್ದರೆ...‌  ಉಚ್ಛಿಷ್ಟ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.


6 ಅಸುರಾ ಭೂರಿ ಭೋಜನಾತ್.....‌ತನ್ನ ಪಿತೃಗಳು ಅಸುರರಾಗಿದ್ದರೆ ,ಭೂರಿ ಭೋಜನದಿಂದ ಅವರಿಗೆ ತೃಪ್ತಿ ಯಾಗುತ್ತದೆ...


7 ದಕ್ಷಿಣೇನ  ಮನುಷ್ಯಾದ್ಯಾಃ ..... ತನ್ನ ಪಿತೃಗಳು ಮನುಷ್ಯರಾಗಿ  ಜನಿಸಿದ್ದ ಕಾಲಕ್ಕೂ ಅಥವಾ ಯಾವುದೇ ಯೋನಿಯಲ್ಲಿ  ಜನಿಸಿದ್ದರೂ ದಕ್ಷಿಣಾಕ್ಯ ಅನ್ನ ದಿಂದ  ಅವರಿಗೆ ತೃಪ್ತಿ ಯಾಗುತ್ತದೆ....

 ಅದಕ್ಕಾಗಿ ಪಿತೃಗಳ  ಸಂತೋಷಕ್ಕಾಗಿ  ಪಿತೃ ಪಕ್ಷದಲ್ಲಿ  ಪಿಂಡಪ್ರಧಾನ ಮಾಡಿ ಬ್ರಾಹ್ಮಣ ರಿಗೆ ಭೋಜನ ದಕ್ಷಿಣೆ ದಾನ ಅನ್ನದಾನ ಇತರ ಶಕ್ತ್ಯನುಸಾರ ದಾನ ಕೊಡಬೇಕು ....

 ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ ೧೫ ದಿನಗಳ ಈ ಕಾಲವನ್ನು "ಪಿತೃ ಪಕ್ಷ" "ಪಕ್ಷಮಾಸ" ಎನ್ನುತ್ತಾರೆ.   

ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ  ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದವುಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ. ಪಕ್ಷಶ್ರಾದ್ಧವನ್ನು  ಮಾಡದವರಿಗೆ  ಶಾಪವನ್ನು ನೀಡುತ್ತಾರೆ.  ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಹುಟ್ಟಿದರೂ ಅಂಗ ವಿಕಲರಾಗಿಯೋ ನಮಗೆ ಹೊರೆಯಾಗಿಯೋ ಹುಟ್ಟಬಹುದು.


ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ.  ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ.  ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ.  ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”.  ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ.  ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ.  ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.


ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು.  ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ.  ಅದುವೇ ಸರ್ವಪಿತೃ ಅಮಾವಾಸ್ಯೆ.ಮತ್ತು ಮಹಾಲಯ ಶ್ರಾದ್ಧ.


ಪಿತೃಗಳಿಗೆ ತಿಲ ತರ್ಪಣವೇಕೆ ?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ).  ಅವು ಅವನ ವೃದ್ಧಿಗೂ ಕಾರಣವಾಗಿವೆ.  ಅವನೇ ಪಿತೃಗಳಿಗೆ ಆಧಾರ.  ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ.  ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ.  ಜೊತೆಗೆ ಯಜ್ಞ ವರಾಹ ಸ್ವಾಮಿಯ ಬೆವರಿಂದ ಹುಟ್ಟಿದ್ದು ಎಳ್ಳು. ರೋಮದಿಂದ ಹುಟ್ಟಿದ್ದು ದಬೆ೯.  ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ.  ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ೧೫ ದಿನ ಹಗಲು ೧೫ ದಿನ ರಾತ್ರಿಯಾದರೆ ೧ ದಿನವಾಗುವುದು.  ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು.  ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ.  ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ.  ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ಕಕ

ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?


ದರ್ಬೆ, ಕುಶ, ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.  ಒಮ್ಮೆ ಗರುಡನು  ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ  ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ‌ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆ ಗುಂಪಿನ ಮೇಲೆ ಇಟ್ಟಿರುತ್ತಾನೆ.  ಅಷ್ಟರಲ್ಲಿ ದೇವೇಂದ್ರನು ಬಂದು  ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಗುಂಪಿನ  ಮೇಲೆ ಬೀಳುತ್ತದೆ.  ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ. 


ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.(ಕೆಲವೆಡೆ ಮೂರು.)


1. ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.

2. ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.

3. ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ(ಕಾಕ ಬಲಿ)

4. ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.

5. ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜಿಸಬೇಕು. ಅಥವಾ ಬ್ರಾಹ್ಮಣ ಭೋಜನಕ್ಕೆ ಕುಳಿತ ನಂತರ.


ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |

ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |


ದದ್ಯಾದ್ವಿಫುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |

ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||


पिता ददाति सत्पुत्रान् गोधनानि पितामह: ।

धनदाता भवेत्सोपि यस्तस्य प्रपितामह: ।।


दद्याद्विपुलमन्नाद्यं वृद्धस्तु प्रपितामह: ।

तृप्ता: श्राद्धेन ते सर्वे दत्वा पुत्रस्य वांछितम्।।

Courtesy: WhatsApp message 

ಸ್ಪರ್ಶಮಣಿ


ಒಂದು ಸಲ ಗೌತಮ ಬುದ್ದನು ಒಂದು ರಾತ್ರಿ ಒಬ್ಬ ಬಡ ಮೀನುಗಾರನ ಮನೆಯಲ್ಲಿ ಆಶ್ರಯ ಪಡೆದು ಅವನ ಆತಿಥ್ಯ ಸ್ವೀಕರಿಸಿದನು. ಬೆಳಗ್ಗೆ ಎದ್ದು ಹೊರಡುವಾಗ ಮೀನುಗಾರನಿಗೆ ಬುದ್ಧನು ನಮಸ್ಕರಿಸಿ, ನಿಮ್ಮ ಆತಿಥ್ಯಕ್ಕೆ ನನ್ನ ಧನ್ಯವಾದಗಳು ನಾನು ನಿನಗೆ ಏನಾದರೂ ಕೊಡುತ್ತೇನೆ ಕೇಳು ಎಂದನು. ಬಡ ಮೀನುಗಾರನು ಮಹಾಸ್ವಾಮಿ ತಾವು ಮಹಾಪುರುಷರು ನಾನು ಬಹಳ ಬಡವ ನನಗೆ ತುಂಬಾ ಬಂಗಾರ ಬೇಕು ಎಂದು ಕೇಳಿದನು. ಬುದ್ಧನು ನಸುನಕ್ಕು, ನಾನು ನಿನಗೆ ನೇರವಾಗಿ ಬಂಗಾರವನ್ನು ಕೈಗೆ ಕೊಡಲಾರೆ ಅದನ್ನು ಪಡೆಯಲು ನೀನು ಸ್ವಲ್ಪ ಶ್ರಮಪಡಬೇಕಾಗುತ್ತದೆ, ಸಮುದ್ರದ ದಂಡೆಗೆ ಹೋಗಿ ಅಲ್ಲಿ ಸಾವಿರಾರು ಕಪ್ಪೆಚಿಪ್ಪುಗಳು ಬಿದ್ದಿರುತ್ತವೆ. ಅವುಗಳಲ್ಲಿ ಒಂದು ಕಪ್ಪೆ ಚಿಪ್ಪು 'ಸ್ಪರ್ಶಮಣಿ' ಆಗಿರುತ್ತದೆ. ಒಂದೊಂದೇ ಕಪ್ಪೆಚಿಪ್ಪನ್ನು ತೆಗೆದು ಕಬ್ಬಿಣದ ಯಾವುದಾದರೂ ವಸ್ತುವಿಗೆ 'ಸ್ಪರ್ಶ' ಮಾಡಿದರೆ ಆ ವಸ್ತು ಕಬ್ಬಿನ ಹೋಗಿ 'ಬಂಗಾರ' ಆಗುತ್ತದೆ. ನೀನು ಸಮುದ್ರ ದಂಡೆಗೆ ಹೋಗಿ ಹುಡುಕಿ ನಿನಗೆ ಎಷ್ಟು ಬೇಕೋ ಅಷ್ಟು ಬಂಗಾರವನ್ನು ಮಾಡಿಕೋ ಎಂದು ಹೇಳಿ ಬುದ್ಧನು ಮುಂದೆ ಪ್ರಯಾಣ ಬೆಳೆಸಿದನು. 


ಇತ್ತ ಮೀನುಗಾರನು ಸಮುದ್ರದ ದಂಡೆಗೆ ಓಡಿ ಬಂದನು. ಕೈಯಲ್ಲಿ ಒಂದು ಕಬ್ಬಿಣದ ಮೊಳೆ ಹಿಡಿದುಕೊಂಡು ಬಂದಿದ್ದನು. ಸಮುದ್ರದ ದಂಡೆ ತುಂಬಾ ಓಡಾಡುತ್ತಾ ಸಾಕಷ್ಟು ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಿದ. ಹೆಚ್ಚು ಜನಗಳ ಸಂಚಾರವಿರದ ಆಳವಿರುವ ಸಮುದ್ರದ ‌ ಹತ್ತಿರ ಬಂದನು. ಸರಿಯಾದ ಜಾಗ ಆರಿಸಿ ಕುಳಿತುಕೊಂಡನು. ತಾನು ಸಮುದ್ರದ ದಂಡೆಗುಂಟ ಓಡಾಡಿ ಆರಿಸಿ ಸಂಗ್ರಹಿಸಿ ತಂದಿದ್ದ ಒಂದೊಂದೇ ಕಪ್ಪೆಚಿಪ್ಪನ್ನು ಬಲಗೈಯಲ್ಲಿ ತೆಗೆದುಕೊಂಡು ಎಡಗೈ ಯ್ಯಲ್ಲಿರುವ ಕಬ್ಬಿಣದ ಮೊಳೆಗೆ ತಗಲಿಸುತ್ತಿದ್ದನು.ಕಬ್ಬಿಣದ ಮೊಳೆ ಬಂಗಾರವಾಯಿತಾ ಎಂದು ನೋಡುವುದು ಆಗದಿದ್ದರೆ ಅದು ಸಾಮಾನ್ಯ ಕಪ್ಪೆಚಿಪ್ಪು ಎಂದು ತಿಳಿದು ಅದನ್ನು ಸಮುದ್ರಕ್ಕೆ ಎಸೆಯುವುದು. ಹೀಗೆ ಬಹಳ ಹೊತ್ತಿನ ತನಕ ಮಾಡುತ್ತಲೇ ಹೋದ. ಆಮೇಲಾಮೇಲೆ ಅದು ಅವನಿಗೆ ಒಂದು ತರಹ ಯಾಂತ್ರಿಕ ಎನ್ನುವಂತಾಯಿತು. ಕಪ್ಪೆಚಿಪ್ಪು ತೆಗೆದುಕೊಳ್ಳುವುದು ಮೊಳೆಗೆ ತಗಲಿಸುವುದು ಸಮುದ್ರಕ್ಕೆ ಹಾಕುವುದು. ಹೀಗೆ ಬಹಳ ಸಮಯ ಕಳೆಯಿತು. ಅವನಿಗೆ ತುಂಬಾ ಬಾಯಾರಿಕೆ ಮತ್ತು ಹಸಿವು ಆಗಿತ್ತು ಆದರೂ ಸಹ ಆಸೆಯಿಂದ ಈ ಕೆಲಸವನ್ನು ಮುಂದುವರಿಸುತ್ತಲೇ ಇದ್ದ. ರಾತ್ರಿ ಕಳೆದು ಬೆಳಗಾಯಿತು. ಅವನಿಗೆ ಗಾಬರಿಯಾಯಿತು. ಯಾಕೆಂದರೆ ಅವನ ಎಡ ಕೈಯಲ್ಲಿದ್ದ ಕಬ್ಬಿಣದ ಮೊಳೆ ಯಾವಾಗಲೋ ಬಂಗಾರದ ಮೊಳೆ ಆಗಿಹೋಗಿತ್ತು. ಆದರೆ ಅದು ಯಾವ ಕಪ್ಪೆಚಿಪ್ಪು ಮುಟ್ಟಿ ಆಗಿತ್ತೋ ಗೊತ್ತಿಲ್ಲ.

ಆ ಕಪ್ಪೆಚಿಪ್ಪನ್ನೂ ಆತ ಸಮುದ್ರಕ್ಕೆ ಬಿಸಾಕಿದ್ದ. ಅಷ್ಟೊತ್ತಿಗಾಗಲೇ ಆತ ಸಮುದ್ರಕ್ಕೆ ಬಿಸಾಡಿದ ಸಾವಿರಾರು ಚಿಪ್ಪುಗಳಲ್ಲಿ ಬಂಗಾರ ಮಾಡುವ ಸ್ಪರ್ಶಮಣಿ ಚಿಪ್ಪು ಕೂಡ ಆಳವಾದ ಸಮುದ್ರದ ನೀರಿನಲ್ಲಿ ಸೇರಿಹೋಗಿತ್ತು.

ನಿರಾಸೆಯಿಂದ ಮೀನುಗಾರನು ಭಗವಾನ್ ಬುದ್ಧನನ್ನು ಬೈದುಕೊಳ್ಳುತ್ತ ತನ್ನ ಹಣೆಬರಹವನ್ನು ಹಳಿಯುತ್ತಾ ಮನೆಗೆ ಹಿಂದಿರುಗಿದನು. ಅವನು ಮುಂದೆ ಬಡತನದ ಜೀವನವನ್ನೇ ಮುಂದುವರೆಸಿದನು. 


ನಮಗೂ ಸಹ ಮೀನುಗಾರನಿಗಾದ ಅನುಭವ ಆಗಿರುತ್ತದೆ. ಒಮ್ಮೊಮ್ಮೆ ಎಂತಹ ಸುವರ್ಣ ಅವಕಾಶಗಳು ಬಂದರೂ, ಅದಕ್ಕಿಂತ ಒಳ್ಳೆಯದು ಬರುತ್ತದೋ ಏನೋ, ಇನ್ನು ಅವಕಾಶಗಳಿಗಾಗಿ ಕಾಯುತ್ತಲೇ ಬದುಕನ್ನು ವ್ಯರ್ಥ ಮಾಡಿಕೊಂಡವರು ಇದ್ದಾರೆ. ಹೆಣ್ಣು ಹೆತ್ತವರು ಇಂಜಿನಿಯರ್, ಡಾಕ್ಟರು ಓದಿದ ಗಂಡು ಆಗಬೇಕೆಂದು, ಅತ್ತೆ ಮಾವಂದಿರ ಜೊತೆ ಇರಬಾರದೆಂದು, ಇಂತಹ ಬೇಕು ಗಳಿಂದಾಗಿ ಮದುವೆಗಳನ್ನು ಮುಂದೂಡಿ 

ಮದುವೆಯಾಗದೆ ಉಳಿದ ಹೆಣ್ಣು ಮಕ್ಕಳು, ಹಾಗೆ ಗಂಡುಮಕ್ಕಳಿಗೆ, ಕೆಲಸದಲ್ಲಿರುವ ಸೊಸೆಯೇ ಬೇಕೆಂದೋ, ಶ್ರೀಮಂತರ ಮನೆ ಹುಡುಗಿ ಆಗಿರಬೇಕೆಂದೋ, ಬಯಸಿ ಹುಡುಗನಿಗೆ ಕೂದಲೆಲ್ಲಾ ಉದುರಿ ವಯಸ್ಸಾದಂತೆ ಆದಮೇಲೆ ಮದುವೆಯಾಗದೆ ಹಾಗೇ ಉಳಿದ ಗಂಡು ಮಕ್ಕಳು ಇದ್ದಾರೆ. ಬಂದ ಅವಕಾಶಗಳನ್ನು ಮುಂದೂಡುತ್ತಾ ಹೋದರೆ ಕೈತಪ್ಪುವುದೇ ಜಾಸ್ತಿಯಾಗುತ್ತದೆ. ಆಸೆ ಪಡುವುದು ತಪ್ಪಲ್ಲ ಅದಕ್ಕಾಗಿ ಜೀವಮಾನವನ್ನು ಕಳೆಯುವುದು ದುರದೃಷ್ಟ.

ಸಿಗುವ ಸಂದರ್ಭವನ್ನೆ ' ಸ್ಪರ್ಶಮಣಿ' ಎಂದೇ ತಿಳಿದುಕೊಂಡು ಶ್ರದ್ಧೆಯಿಂದ 

ಆಗಬೇಕಾದ ಕೆಲಸಗಳನ್ನು ಮಾಡಬೇಕಾದ ಸಮಯದಲ್ಲಿ ಮುಗಿಸುತ್ತಾ ಬಂದರೆ, ಮಾಡುವ ಕೆಲಸವೆಲ್ಲಾ ಬಂಗಾರವೇ ಆಗುತ್ತದೆ. 


(ಇದು ನನ್ನ ಅನಿಸಿಕೆ ಮಾತ್ರ.) 


"ಮಧು ಸಿಕ್ತೋ ನಿಂಬಖಹ,ಹ

ದುಗ್ದ ಪುಷ್ಟೋ ಭುಜಂಗಮಹ 

ಗಂಗಾ ಸ್ನಾತೋಪಿ ದುರ್ಜನ,  

ಸ್ವಭಾವಂ ನೈವ ಮುಂಚತಿ". 


ಬೇವಿನ ಕಾಂಡಕ್ಕೆ ಜೇನುತುಪ್ಪವನ್ನು ಹಚ್ಚಿದರೂ,ಹಾವಿಗೆ ಹಾಲನ್ನು ಎರೆದರೂ, ದುರ್ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ,ಯಾರ ಸ್ವಭಾವವು ಕೂಡ ಬದಲಾಗದು. 


Courtesy: WhatsApp message 

ಸಂತ ಕಬೀರದಾಸ


ಕಬೀರದಾಸರು ಉತ್ತರ ಭಾರತದ ಶ್ರೇಷ್ಠ ಸಂತ ಕವಿಯಾಗಿದ್ದರು. ಅವರು ಮಾನವ ಪ್ರೇಮಿಗಳು, ದಯಾಳು ಆಗಿದ್ದರು. ಕಬೀರದಾಸರು  ವೃತ್ತಿಯಿಂದ ನೇಕಾರರಾಗಿದ್ದು  ಸ್ವತಹ ಚಾದರ ನೇಯುತ್ತಿದ್ದರು.  ಪೇಟೆಗೆ ತಯಾರಿಸಿದ ಚಾದರಗಳನ್ನು ಒಯ್ದು ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು.  ಕಬೀರರು ಬದುಕಿದ್ದಾಗಲೇ ದಂತಕಥೆಯಾಗಿದ್ದರು.ಅವರ ಜೀವನದಲ್ಲಿ ಒಂದು ಘಟನೆ. 


ಕಬೀರರನ್ನು ಎಲ್ಲರೂ ಬಹಳ ಪ್ರೀತಿ, ಗೌರವದಿಂದ  ಕಾಣುತ್ತಿದ್ದರು. ಎಲ್ಲರಿಗೂ  ಇಷ್ಟವಾದರೂ,  ಕೆಲವು ಜನರಿಗೆ ಅವರ ಮೇಲೆ ಅಸೂಯೆ ಇತ್ತು.  ಈ ನೇಕಾರನಿಗೆ ಯಾಕಿಷ್ಟು ಜನ ಮರ್ಯಾದೆ ಕೊಡುತ್ತಾರೆಂದು ಸಂಕಟಪಡುತ್ತಿದ್ದರು. ಏನಾದರೂ ಮಾಡಿ ಕಬೀರರ ಹೆಸರನ್ನು ಕೆಡಿಸಬೇಕು ಎಂದು ಕೆಲವು ಜನರು ಒಂದು ಉಪಾಯ ಮಾಡಿದರು.

ಕಬೀರರು ತಮ್ಮ ಮನೆಯಲ್ಲಿ ನೇಯ್ದ ಚಾದರ ಗಳನ್ನು ತೆಗೆದುಕೊಂಡು ಪೇಟೆಗೆ ಹೋಗಿ ಅದನ್ನು ಮಾರಿ ಮತ್ತೆ ಬೇಕಾದ ಹೊಸ ದಾರಗಳನ್ನು ತರಬೇಕು. ಕಬೀರರನ್ನು ಕಂಡರೆ ಆಗದೆ ಇದ್ದ ಜನ ಈ ಅವಕಾಶವನ್ನು ಬಳಸಿಕೊಂಡು, ಒಬ್ಬ ವೇಶ್ಯ  ಸ್ತ್ರೀಗೆ , ನೀನು ಒಂದು ನಾಟಕ ಮಾಡಬೇಕು. ಅದಕ್ಕೆ ಹಣ ಕೊಡುತ್ತೇವೆ. ಕಬೀರರು ಚಾದರ ಮಾರಲು ಪೇಟೆಗೆ ಬಂದಿರುವಾಗ ಅವರ ಕೈಯನ್ನು ಹಿಡಿದುಕೊಂಡು ಜನಗಳಿಗೆ ಇವನು ನನ್ನ ಗಂಡ ನನ್ನನ್ನು ಬಿಟ್ಟು ಬಂದಿದ್ದಾನೆ ಎಂದು ಅಳಬೇಕು, ಅವನು ಬಹಳ ಮರ್ಯಾದಸ್ಥ ಎಂದು  ಜನರು ತಿಳಿದುಕೊಂಡಿದ್ದಾರೆ, ಅವನು  ನಿನ್ನನ್ನು ಎಲ್ಲಿ ಮದುವೆಯಾಗಿದ್ದೇನೆ ನನಗೆ ಮದುವೆಯಾದ ಹೆಂಡತಿ ಮನೆಯಲ್ಲಿದ್ದಾಳೆ. ಎಂದು ಹೇಳಿದರೂ ಕೇಳದೆ ನೀನು ಜನಗಳ ಎದುರಿಗೆ ರಂಪಾಟ ಮಾಡಬೇಕು. ಆ ಸಮಯಕ್ಕೆ ನಾವೆಲ್ಲರೂ ಬಂದು ನಿನ್ನ ಪರವಾಗಿ ನಿಲ್ಲುತ್ತೇವೆ. ಅವನ  ಮರ್ಯಾದೆ ಕಳೆಯುವಂತೆ  ನಾಟಕ ಮಾಡಬೇಕು  ಎಂದು ಹಣಕೊಟ್ಟರು. ಆಕೆ ಹಣ ತೆಗೆದುಕೊಂಡು ಅವರು ಹೇಳಿದಂತೆ ಮಾಡಲು ಒಪ್ಪಿಕೊಂಡಳು. ಕಬೀರರು ಹೋಗುವ ಮಾರ್ಕೆಟಿನ ಜಾಗ ತೋರಿಸಿ ಹೋದರು. 


ಎಂದಿನಂತೆ ಕಬೀರರು ಚಾದರ ಗಳನ್ನು ತೆಗೆದುಕೊಂಡು ಬಂದರು. ಮಾರ್ಕೆಟಿಗೆ  ಬರುವುದನ್ನೇ ಕಾಯುತ್ತಿದ್ದು, ಮಾರ್ಕೆಟಿನ ನಡು ರಸ್ತೆಗೆ ಬಂದಾಗ ಈ ಹೆಂಗಸು ಓಡಿಹೋಗಿ ಕಬೀರರ ಕೈಹಿಡಿದುಕೊಂಡು ಜೋರಾಗಿ ಅಳುತ್ತಾ "ನೀವು ಯಾಕೆ ಹೀಗೆ ಮಾಡಿದಿರಿ ನನ್ನನ್ನು ಮದುವೆಯಾಗಿ ನಡು ನೀರಲ್ಲಿ ಕೈಬಿಟ್ಟು ಬಂದಿದ್ದೀರಿ, ಎರಡು ವರ್ಷಗಳಿಂದ ನಿಮ್ಮನ್ನು ಹುಡುಕಾಡುತ್ತಿದ್ದೇನೆ. ನಾನು ಎಷ್ಟು ಕಷ್ಟಪಟ್ಟಿದ್ದೇನೆ. ನನಗೆ ಯಾರು ದಿಕ್ಕು" ಎಂದು ಜೋರಾಗಿ ಜನಗಳಿಗೆ ಕೇಳುವಂತೆ ಅಳುತ್ತಿದ್ದಳು. ಇದನ್ನೆಲ್ಲಾ ನೋಡಿ ನೂರಾರು ಜನ ಸೇರಿ ಬಿಟ್ಟರು. ಇದೇನು ಕಬೀರರು ಸಂತರು ಸಾತ್ವಿಕರು ಎಂದುಕೊಂಡಿದ್ದೆವು ಇವರು ಈ ತರಹ ಕೆಲಸ ಮಾಡಿದ್ದಾರಾ? ಎಂಬಂತೆ ಕೌತುಕದಿಂದ ನೋಡುತ್ತಿದ್ದರು. ಕಬೀರರು ಸುತ್ತಲೂ ನೋಡಿದರು. ಕ್ಷಣಮಾತ್ರದಲ್ಲಿ ಎಲ್ಲವೂ ಅರ್ಥವಾಯಿತು. ಆಕೆ ಕಬೀರರ ಕಾಲನ್ನು ಗಟ್ಟಿಯಾಗಿ ಹಿಡಿದು ಕೊಂಡು ಅಳುತ್ತಿದ್ದಳು. ಯೋಚಿಸಿದ ಕಬೀರರು ಹೆಣ್ಣಿನ ಕೈಹಿಡಿದು "ಏಳಮ್ಮ ನಡಿ ಮನೆಗೆ ಹೋಗೋಣ ರಸ್ತೆ ಮಧ್ಯ ಹೀಗೆಲ್ಲಾ ಅಳಬಾರದು" ಎಂದರು. ಆ ಹೆಂಗಸಿಗೆ ಈಗ ನಿಜಕ್ಕೂ ಹೆದರಿಕೆ ಆಯಿತು. ಅವಳು ಕಬೀರರ ಮನೆಗೆ ಹೋಗಲು ಬಂದವಳಲ್ಲ ಹಣಕ್ಕೆ ಬಂದವಳು. ಅಲ್ಲದೆ ಹಣ ಕೊಟ್ಟವರು ಮಾರ್ಕೆಟಿನಲ್ಲಿ ಮಾತ್ರ ಹೀಗೆ ಮಾಡಲು ಹೇಳಿದ್ದರು ಅದು ಒಂದಷ್ಟು ಸಮಯ ಮಾತ್ರ. ಅವಳಿಗೆ ನಿಜಕ್ಕೂ ದಿಗಿಲಾಗಿ ಬಿಟ್ಟಿತು. ಅಷ್ಟು ಹೊತ್ತಿಗೆ ಅಲ್ಲಿ ಇದ್ದ ಜನರೆಲ್ಲರೂ ರಾಜನ ಹತ್ತಿರ ಹೋಗಿ ಕಬೀರರು ಯಾವುದೋ  ಮಹಿಳೆಯನ್ನು ಮದುವೆಯಾಗಿ  ಮೋಸ ಮಾಡಿದ್ದಾನೆ. ಈಗ ಆಕೆಯ ಕೈ ಹಿಡಿದು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಚಾಡಿ ಹೇಳಿದರು. ರಾಜನಿಗೂ ಬಹಳ ಆಶ್ಚರ್ಯವಾಯಿತು ಕಬೀರರು ಎಂತಹ ಸಂತರು ಮಹಾನುಭಾವರು ಇವರು ಇಂಥ ಕೆಲಸ ಮಾಡುತ್ತಾರೆ ಅವರನ್ನು ಕರೆದುಕೊಂಡು ಬನ್ನಿ ಎಂದನು. 


ರಾಜ ಭಟರು ಅವನನ್ನು ಕರೆದುಕೊಂಡು ಹೋಗಲು ಬಂದಾಗ, ಕಬೀರರು ನಡಿ ಆಸ್ಥಾನಕ್ಕೆ ಹೋಗೋಣ ಎಂದು ಆಕೆಯ ಕೈಹಿಡಿದುಕೊಂಡು ಅರಮನೆಗೆ ಹೊರಟರು. ಆಕೆಯು ಇಲ್ಲ ನನ್ನ ಕೈ ಬಿಡಿ ನಾನು ಬರುವುದಿಲ್ಲ. ರಾಜರ ಎದುರಿಗೆಲ್ಲ ನಾನು ಬರುವವಳಲ್ಲ ಎಂದಳು. ಆದರೆ ಕಬೀರರು ಅದು ಹೇಗೆ ಆಗುತ್ತೆ ನೀನು ನನ್ನ ಮದುವೆಯಾಗಿರುವೆ ಹೆದರಿಕೆ ಯಾಕೆ ಹೋಗೋಣ ಎಂದು ಅವಳನ್ನು ಕೈಹಿಡಿದುಕೊಂಡು ಆಸ್ತಾನಕ್ಕೆ ಬಂದರು. ಇದನ್ನು ಕಂಡು ರಾಜನಿಗೆ ಬಹಳ ಆಶ್ಚರ್ಯವಾಯಿತು. ಇದೇನು ಕಬೀರ ನಿಮ್ಮನ್ನು ದೊಡ್ಡ ಸಂತರು ಎಂದುಕೊಂಡಿದ್ದೆವು ನೀವು ಹೇಗೆ ಮಾಡುವುದು ಎಷ್ಟು ಸರಿ ಎಂದು ರಾಜನು ಕೇಳಿದನು.

ಅಷ್ಟು ಹೊತ್ತಿಗೆ ಆಗಲೇ ಆ ಹೆಂಗಸು  ಹೆದರಿ ನಡುಗಿ  ಹೋಗಿದ್ದಳು. ಇನ್ನೂ ರಾಜನ ಆಸ್ಥಾನದಲ್ಲಿ ವಿಚಾರಣೆ ಆದರೆ ತನ್ನ ಗುಟ್ಟನ್ನು ಬಯಲಾಗುತ್ತದೆ ಎಂದು ಹೆದರಿಕೊಂಡು,  ಕಬೀರನಿಂದ ಕೈಬಿಡಿಸಿಕೊಂಡು ಓಡಿ ಹೋಗಿ ರಾಜನ ಕಾಲು ಹಿಡಿದುಕೊಂಡಳು. ಪ್ರಭು ಇದರಲ್ಲಿ ಇವರ ತಪ್ಪೇನೂ ಇಲ್ಲ ನನಗೆ ಹಣಕೊಟ್ಟು ಹೀಗೆ  ನಾಟಕ ಮಾಡುವಂತೆ ಹೇಳಿದ್ದಾರು ಎಂದು ತನ್ನ ತಪ್ಪನ್ನು ಒಪ್ಪಿಕೊಂಡುಳು. 


ರಾಜನಿಗೆ ಎಲ್ಲವೂ ಅರ್ಥವಾಯಿತು. ರಾಜನು ಕಬೀರರನ್ನು ನೋಡುತ್ತಾ,ಅಲ್ಲಾ ಕಬೀರರೇ, ಈ ಹೆಂಗಸು ನಿಮ್ಮ ಹೆಂಡತಿ ಅಲ್ಲ ಎಂದು ನಿಮಗೆ ಗೊತ್ತಿತ್ತು ಆದರೂ ನೀವು ಯಾಕೆ ಹೀಗೆ ನಾಟಕ ಮಾಡಿದಿರಿ? ಪ್ರತಿಭಟನೆ ಮಾಡಬಹುದಿತ್ತು. ಅದಕ್ಕೆ ಕಬೀರರು ಇದು ನಾಟಕ ಎಂದು ನನಗೆ ಅಲ್ಲಿಯೇ ಗೊತ್ತಿತ್ತು. ಇಲ್ಲಿಯೂ ಗೊತ್ತಿದೆ. ಅಲ್ಲಿ ಆರಂಭವಾದ ನಾಟಕ ಇಲ್ಲಿ ಮುಗೀತು.  ಈಗ ನನ್ನ ಮನೆಗೆ ನಾನು ಹೋಗುತ್ತೇನೆ. ಅವಳ ಮನೆಗೆ ಅವಳು ಹೋಗುತ್ತಾಳೆ. ಇದಕ್ಕೆಲ್ಲಾ ಪ್ರತಿಭಟನೆ ಯಾಕೆ? ಎಂದು ಕಬೀರರು ರಾಜನನ್ನೇ ಕೇಳಿದರು. ಕಬೀರರು ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ, ನೋವು ,ದುಃಖ ಅಥವಾ ಸಂತೋಷ  ಇಂತಹ ಯಾವುದರಲ್ಲೂ ಅವರಿಗೆ ವ್ಯತ್ಯಾಸವಿರಲಿಲ್ಲ. ಸ್ಥಿತಪ್ರಜ್ಞರಾಗಿ ಆತ್ಮಪ್ರಜ್ಞೆ ಬೆಳೆಸಿಕೊಂಡ  ಇವರು ಮಹಾನ್ ಸಂತರಾದರು. 


ದು: ಖ್ವೇಷ್ವನುದ್ವಿಗ್ನಮನಾ:

ಸುಖೇಷು ವಿಗತ ಸ್ಪೃ ಹ:

ವೀತ ರಾಗ ಭಯ ಕ್ರೋಧ:

ಸ್ತಿತಧೀರ್ಮುನಿರುಚ್ಯತೇ 


ವಿಪತ್ತಿನಲ್ಲಿ ವಿಚಲಿತನಾಗದೆ , ಸುಖಕ್ಕಾಗಿ ಹಂಬಲಿಸದೆ, ಮೋಹ, ಭಯ ಮತ್ತು ಸಿಟ್ಟಿನಿಂದ ಯಾರು ಮುಕ್ತನಾಗಿರುತ್ತಾನೋ ಅಂತಹ ಮುನಿಯು ಸ್ಥಿತಪ್ರಜ್ಞ ಎನಿಸುತ್ತಾನೆ. 


Courtesy: WhatsApp Message

ಹೀಗೆ ಮತ್ತೊಂದು ಆಧ್ಯಾತ್ಮಿಕ ಸತ್ಯಘಟನೆ ಕತೆ..

 

ಕಾಬೂಲ್ ನಗರದಲ್ಲಿ ರಶ್ ಖಾನ್ (ರಸ್ ಖಾನ್) ಹೆಸರಿನ ಒಬ್ಬ ಸಮಗಾರನಿದ್ದ.(ಚಮ್ಮಾರ )ಒಮ್ಮೆ ಜಾತ್ರೆಯಲ್ಲಿ ಭಾರತದ ವ್ಯಾಪಾರಿಗಳು ಹಾಕಿದ್ದ ಮಳಿಗೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಪುಟಾಣಿ ಕೃಷ್ಣನ ಚಿತ್ರಪಟ ನೋಡಿದ. ಆ ಮಗುವಿನ ದಿವ್ಯ ಚೆಲುವಿಗೆ ಮನಸೋತ. ಆ ಮಗು ಯಾರು, ಎಲ್ಲಿರುತ್ತದೆ ಎಂದು ವಿಚಾರಿಸಿದಾಗ, ಕೆಲಸದ ಗಡಿಬಿಡಿಯಲ್ಲಿದ್ದ ಅಂಗಡಿಯವ ಭಾರತದ ಮಥುರೆಯಲ್ಲಿ ಅಂದು ಮಾತು ತುಂಡರಿಸಿದ.


ರಶ್ ಖಾನನ ಮನಸ್ಸಿನ ತುಂಬ ಮಗುವಿನ ಚಿತ್ರ ತುಂಬಿಕೊಂಡಿತು. ಬೆಣ್ಣೆ ಕದಿಯುತ್ತಿದ್ದ ಆ ಮಗುವಿನ ಕಾಲಲ್ಲಿ ಚಪ್ಪಲಿ ಇರಲಿಲ್ಲ ಎಂಬುದನ್ನು ಗಮನಿಸಿದ್ದ. ಅವನಿಗೆ ಅದೇ ಒಂದು ಚಿಂತೆಯಾಗಿಬಿಟ್ಟಿತು. ಹೇಗಾದರೂ ಆ ಮಗುವಿಗೆ ಚಪ್ಪಲಿ ತೊಡಿಸಬೇಕಲ್ಲ ಎಂದು ಯೋಚಿಸತೊಡಗಿದ. ಆ ಮಗುವನ್ನು ಮುದ್ದಿಸಿ ಚಪ್ಪಲಿ ತೊಡಿಸುವ ಆಶೆ ಅವನನ್ನು ಆವರಿಸಿಬಿಟ್ಟಿತು.


ಅಂಗಡಿಯಾತನಲ್ಲಿ ಮಗುವಿನ ಚಿತ್ರ ಕೇಳಿ ಪಡೆದ ರಶ್ ಖಾನ್, ಸಾಕಷ್ಟು ಕಷ್ಟ ನಷ್ಟ ಎದುರಿಸಿ ಭಾರತ ತಲುಪಿದ. ಮಥುರೆಯನ್ನೂ ತಲುಪಿದ. ಸಿಕ್ಕವರ ಬಳಿಯೆಲ್ಲ ಚಿತ್ರದ ಮಗುವಿನ ಬಗ್ಗೆ ವಿಚಾರಿಸಿದ.  


ಜನರಿಗೆ ಅವನ ವಿಚಾರಣೆ ವಿಚಿತ್ರವಾಗಿ ತೋರಿತು. ಅವರು ‘ದೇಗುಲದಲ್ಲಿದ್ದಾನೆ’ ಎಂದು ಉತ್ತರಿಸಿ ಸುಮ್ಮನಾದರು.


ರಶ್ ಖಾನ್ ದೇಗುಲಗಳನ್ನೆಲ್ಲ ಎಡತಾಕಿದ. ಎಲ್ಲಿಯೂ ಅವನಿಗೆ ಒಳಬಿಡಲಿಲ್ಲ. ಅನ್ನ, ನೀರು ಸೇವಿಸದೆ ಊರಿಂದೂರಿಗೆ ಅಲೆದ ರಶ್ ಖಾನ್, ಮಗುವಿನ ಪಾದಕ್ಕೆ ಚಪ್ಪಲಿ ತೊಡಿಸುವ ಆಸೆ ನೆರವೇರದೆ ಹೋದುದಕ್ಕೆ ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟ. ಅವನ ಹೃದಯದಲ್ಲಿ ಪ್ರೇಮ ಪ್ರವಾಹವಾಗಿ ಹರಿಯುತ್ತಿತ್ತು. ಅಸಹಾಯಕನಾಗಿ, ದೀನನಾಗಿ, ಮಗುವಿನ ಚಿತ್ರವನ್ನೆ ನೋಡುತ್ತ ಕುಳಿತುಬಿಟ್ಟ.


ಇದ್ದಕ್ಕಿದ್ದಂತೆ ಯಾರೋ ಹೆಗಲನ್ನು ಬಳಸಿ ಕೆನ್ನೆ ಸೋಕಿಸಿದಂತೆ ಆಯಿತು. ಅದೊಂದು ದಿವ್ಯ ಮೃದು ಸ್ಪರ್ಶ! ನೋಡಿದರೆ ಚಿತ್ರದ ಮಗು ಜೀವತಾಳಿ ನಿಂತಿದೆ!!


ರಶ್ ಖಾನನ ಆನಂದಕ್ಕೆ ಪಾರವೇ ಇಲ್ಲ. ಮಗುವನ್ನೆತ್ತಿ ಕುಣಿದಾಡಿಬಿಟ್ಟ. ಮಗು, “ನನ್ನ ಚಪ್ಪಲಿ ಎಲ್ಲಿ?” ಎಂದು ತೊದಲ್ನುಡಿಯಲ್ಲಿ ಕೇಳಿತು. ಕಣ್ಣೀರು ಒರೆಸಿಕೊಳ್ತಾ ರಶ್ ಖಾನ್ ಜೋಳಿಗೆಯಿಂದ ಪುಟ್ಟದೊಂದು ಜೊತೆ ಚಪ್ಪಲಿ ಹೊರತೆಗೆದ. ಕೃಷ್ಣ ಪಾದಗಳಿಗೆ ಹಿಡಿದ. ಅದರ ಅಳತೆ ಹೇಳಿಮಾಡಿಸಿದ ಹಾಗಿತ್ತು. ಅದನ್ನು ತೊಟ್ಟ ಮಗು ಕುಣಿಯುತ್ತಾ, ನಗುತ್ತಾ ಅದೃಶ್ಯವಾಗಿಹೋಯಿತು.


ತಾನು ಕನಸು ಕಂಡೆನಿರಬೇಕು ಅಂದುಕೊಂಡ ರಶ್ ಖಾನ್ ಜೋಳಿಗೆ ತೆರೆದು ನೋಡಿದ. ಅಲ್ಲಿ ಚಪ್ಪಲಿಗಳಿರಲಿಲ್ಲ. ಚಿತ್ರದ ಮಗು ಬಂದುಹೋಗಿದ್ದು ಖಾತ್ರಿಯಾಯಿತು. ಅವನ ಹೃದಯದಲ್ಲಿ ಅದರ ಸ್ಪರ್ಶದ ಬಿಸುಪು ನಿಚ್ಚಳವಾಗಿತ್ತು. ರಶ್ ಖಾನ್ ಅದರ ಅನುಭೂತಿಯಲ್ಲೆ ದಿನಗಟ್ಟಲೆ ಕಳೆದ.


ಮುಂದೆ ಅವನಿಗೆ ಆ ಮಗುವಿನ ಬಗ್ಗೆ ತಿಳಿಯಿತು. ಅನಂತರ ಅವನು ಕೃಷ್ಣಪ್ರೇಮಿಯಾಗಿ ತನ್ನ ಬದುಕನ್ನು ಸಾಧನೆಯಲ್ಲಿ ಕಳೆದ. ಬ್ರಜಭೂಮಿಯಲ್ಲೆ ನೆಲೆಸಿ, ಬ್ರಜ ಬಾಷೆಯಲ್ಲಿ ಸುಂದರವಾದ ಅನೇಕ ದ್ವಿಪದಿಗಳನ್ನು ರಚಿಸಿದ.


ರಶ್ ಖಾನನ ಈ ದ್ವಿಪದಿಗಳು ಬ್ರಜವಾಸಿಗಳ ಬಾಯಲ್ಲಿ ಇಂದಿಗೂ ನಲಿಯುತ್ತವೆ. ಹೀಗೆ ರಶ್ ಖಾನ್, ಕಾಲವಾದ ನಂತರವೂ ಕೃಷ್ಣಪ್ರೇಮದಲ್ಲಿ ಅಮರವಾಗಿದ್ದಾನೆ. ಭಗವಂತ ಯಾರನ್ನು ಯಾವಾಗ ಯಾವ ರೀತಿ ಆಶ್ರಯಿಸುತ್ತಾನೆ. ಭಗವಂತನೇ ಬಲ್ಲಾ,,,🌺💐✍️🙏. ಶ್ರೀ ವೇದಮಾತಾ ಗುರುಕುಲ.ಈತರ ಭಗವಂತನ ಪವಾಡದ ಕಥೆಗಳನ್ನು ಓದಿದರೆ ಕೇಳಿದರೆ ನನಗೆ ಒಂತರ ಆಗುತ್ತೆ. ನನ್ನ ಕಣ್ಣಾಲಿಗಳು ತುಂಬಿ ಬರುತ್ತದೆ. ಯಾರೂ ದೇವರನ್ನು ಗಂಭೀರವಾಗಿ ತೆಗೆದು ಕೊಳ್ಳುವವರೋ ಈ ರೀತಿ ಅನುಭವ ಯಾರಿಗೆ  ಆಗುತ್ತೋ ಅವರು ಎಂದಿಗೂ ಸುಳ್ಳು ಹೇಳಲು ಮೋಸ ಮಾಡಲು ಹೆದರುವವರು. ಭಗವಂತ ನಮ್ಮ ಎಲ್ಲಾ ಚಲನ ವಲನ ಗಮನಿಸುತ್ತಾನೆ ಎಂದು ಭಾವಿಸಿ ಆದಷ್ಟು ಸತ್ಯ ಧರ್ಮ ಪ್ರಾಮಾಣಿಕತೆಯಿಂದ ಬದುಕುವರು ಆಗಿರುತ್ತಾರೆ 🌺💐🙏

ಎರಡು ಮುಖಗಳು

ಪ್ರಾಥಮಿಕ ಶಾಲೆಯೊಂದರ ಗಣಿತದ ತರಗತಿಯಲ್ಲಿ, ಲೆಕ್ಕದ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು, ಪುಟ್ಟ ಬಾಲಕನಿಗೆ ಪ್ರಶ್ನೆಯೊಂದನ್ನು ಕೇಳಿದರು.  "ಮಗೂ, ನಿನಗೆ ಎರಡು ದೊಡ್ಡ ಮಾವಿನಹಣ್ಣು ಕೊಡುತ್ತೇನೆ. ಜೊತೆಗೆ ಎರಡು ಚಿಕ್ಕ ಮಾವಿನ ಹಣ್ಣನ್ನು ಕೊಡುತ್ತೇನೆ. ಹಾಗಾದರೆ ನಿನ್ನ ಬಳಿ ಎಷ್ಟು ಹಣ್ಣು ಇರುತ್ತವೆ?"


ಬಾಲಕ ಕ್ಷಣದಲ್ಲಿಯೇ ಉತ್ತರಿಸಿದ, "ಐದು ಮೇಡಂ".


ಉತ್ತರ ಕೇಳಿದ ಶಿಕ್ಷಕಿಗೆ ಆಶ್ಚರ್ಯವಾಯಿತು. ಜೊತೆಗೆ ಗಣಿತದ ಸರಳ ಪ್ರಶ್ನೆಯು ವಿದ್ಯಾರ್ಥಿಗೆ ಇಷ್ಟೊಂದು ಕಷ್ಟವಾಗುತ್ತಿರುವುದು ಕಂಡು ಮರುಕವಾಯಿತು. ಆದರೂ ಪಟ್ಟು ಬಿಡದೆ,


"ನೋಡು ಮಗೂ ಗೊಂದಲ ಮಾಡಿ ಕೊಳ್ಳಬೇಡ. ನಾನು ನಿನಗೆ ಮೊದಲಿಗೆ ಎರಡು, ಆಮೇಲೆ ಎರಡು ಮಾವಿನಹಣ್ಣು ಕೊಡುತ್ತೇನೆ. ನಿನ್ನ ಬಳಿಗೆ ಎಷ್ಟು ಹಣ್ಣು ಇದ್ದಂತಾಯಿತು?" ಎಂದು ಮರು ಪ್ರಶ್ನಿಸಿದರು.


"ಐದೇ ಮೇಡಂ" ಬಾಲಕ ಆತ್ಮವಿಶ್ವಾಸದಿಂದ ಉತ್ತರಿಸಿದ. ಈ ಬಾರಿ  ಸಿಟ್ಟು ಬಂದರೂ ಸಮಾಧಾನದಿಂದ ಮತ್ತೊಮ್ಮೆ, "ಸರಿಯಾಗಿ ಕೇಳಿಸಿಕೋ! ನಿನಗೆ ನಾನು ಮೊದಲಿಗೆ ಎರಡು ಸೇಬನ್ನು, ಆಮೇಲೆ ಇನ್ನೆರಡು ಸೇಬನ್ನು ಕೊಡುತ್ತೇನೆ. ಆಗ ನಿನ್ನ ಬಳಿ ಎಷ್ಟು ಸೇಬು ಇರುತ್ತವೆ?" ಎಂದು ಕೇಳಿದರು. ಆಗ, "ನಾಲ್ಕು ಸೇಬು ಮೇಡಂ" ಎಂದ ಬಾಲಕ. ಸರಿ ಉತ್ತರದಿಂದ ಖುಷಿಯಾದ ಶಿಕ್ಷಕಿಯು ಮೊದಲು ಕೇಳಿದ್ದ ಮಾವಿನ ಹಣ್ಣಿನ ಲೆಕ್ಕವನ್ನೇ ಕೇಳಿದರು. "ಯೋಚಿಸಿ ಹೇಳು.. ಈಗ ನಿನ್ನ ಬಳಿ ಎಷ್ಟು ಮಾವಿನ ಹಣ್ಣುಗಳಿವೆ?" ಎಂದಾಗ, "ಐದು ಮೇಡಂ" ಎಂದ ಬಾಲಕ. ಸಿಟ್ಟಾದ ಶಿಕ್ಷಕಿಯು, "ನಾನು ಕೊಡುವುದೇ ನಾಲ್ಕು ಹಣ್ಣು.. ನಿನ್ನ ಬಳಿ ಐದು ಮಾವಿನಹಣ್ಣು ಹೇಗೆ ಬರುತ್ತದೆ?" ಎಂದಾಗ, ಬಾಲಕನು "ಮೇಡಂ ನೀವು ನಾಲ್ಕು ಕೊಟ್ಟರೂ ನನ್ನ ಬಳಿ ಐದು ಮಾವಿನ ಹಣ್ಣೇ ಇರುತ್ತವೆ. ಏಕೆಂದರೆ ನನ್ನ ಬ್ಯಾಗಿನಲ್ಲಿ ಒಂದು ಮಾವಿನ ಹಣ್ಣು ಇದೆ" ಎಂದನು. ಇದು ಎಲ್ಲೋ ಓದಿದ ಕತೆ.


ಆಗ ಶಿಕ್ಷಕಿಗೆ ತನ್ನ ತಪ್ಪಿನ ಅರಿವಾಯಿತು. ಪ್ರತಿಯೊಂದು ಸಂಗತಿಗೂ ಎರಡು ಮುಖಗಳಿರುತ್ತವೆ. 'ನಾವೇ ಸರಿ, ನಾನು ಅಂದುಕೊಂಡಿರುವುದೇ ಸರಿ' ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಸಂಗತಿಗೆ ಇರುವ ಇನ್ನೊಂದು ಮುಖದ ಬಗ್ಗೆ ಆಲೋಚನೆ ಮಾಡದೆಯೇ, 'ನಾವು ಹೇಳುತ್ತಿರುವುದೇ ಅಂತಿಮ ಸತ್ಯ' ಎನ್ನುವ ತೀರ್ಮಾನದಿಂದ ಅಪಾಯ ತಪ್ಪಿದ್ದಲ್ಲ. ಕೆಲವೊಮ್ಮೆ ಇದರಿಂದ ಮುಜುಗರಕ್ಕೂ ಸಿಲುಕಬೇಕಾಗುತ್ತದೆ.


ರಾವಣನಿಗೆ ಹತ್ತು ಮುಖಗಳಿದ್ದವು ಅಂದರೆ ಹತ್ತು ಆಯಾಮಗಳು. 'ನಾನೇ ಸರ್ವಜ್ಞ' ಎಂಬ ಭಾವಿಸದೆ, ನಾವು ಹತ್ತು ಮುಖಗಳು ಬೇಡ, ಒಂದು ಸಂಗತಿಗಿರುವ ಎರಡು ಮುಖಗಳನ್ನಾದರೂ ಒಪ್ಪಿಕೊಳ್ಳೋಣ, ಅರ್ಥ ಮಾಡಿಕೊಳ್ಳೋಣ. ನಮ್ಮ ಅಂತಃ ಪ್ರಜ್ಞೆಯನ್ನು ಎಚ್ಚರಗೊಳಿಸಿ, ಪ್ರತಿಯೊಂದು ವಿಷಯವನ್ನೂ ಜಾಗೃತಾವಸ್ಥೆಯಲ್ಲಿ ಗಮನಿಸೋಣ. ಪ್ರಜ್ಞಾಪೂರ್ವಕವಾದ ಬದುಕು ನಮ್ಮದಾಗಿಸಿಕೊಳ್ಳೋಣ.


ಶ್ರೀಕೃಷ್ಣಾರ್ಪಣಮಸ್ತು

ನೆಮ್ಮದಿಯ ಗುಟ್ಟು


ಅಲ್ಲೊಂದು ಪುಟ್ಟ ಗುಡಿಸಲು. ಆರೆಂಟು ಜನರ ಸಂಸಾರ. ಕೂಲಿನಾಲಿ ಮಾಡಿ ಜೀವನ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ, ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ, ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳುಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು, ನಂತರ ಅವರನ್ನು ಕರೆಯುವುದನ್ನು ನಿಲ್ಲಿಸಿ, ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು, ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು.


ಇದು ಸಂಸ್ಕೃತ ಭಾಷೆಯಲ್ಲಿ ಬರುವ ಒಂದು ಕಥೆಯಾದರೂ, ನೀಡುವ ಸಂದೇಶ ಎಷ್ಟೊಂದು ದೊಡ್ಡದಲ್ಲವೇ? ನಾವು ಎಷ್ಟೋ ಬಾರಿ ಇತರರೊಂದಿಗೆ ಹೋಲಿಸಿಕೊಂಡು ನಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ನಮಗೆ ಒದಗಿರುವುದರಲ್ಲೇ ಸಂತೋಷದಿಂದ ಬಾಳಲು ಸಂಕಲ್ಪಿಸಿದರೆ ಕೊರಗು ಕಾಡುವುದಿಲ್ಲ.

Friday 26 August 2022

Tech Thoughts: Paragraph Retrieval from Mysql

Tech Thoughts: Paragraph Retrieval from Mysql: Greetings of the Day!!! When I was working with one of the website Designing, I noticed a strange problem. May be it's not a problem....

Thursday 25 August 2022

ಕಾಶಿಯಲ್ಲಿನ ಕೆಲವು ವಿಚಿತ್ರಗಳು..ವಿಶೇಷಗಳು

 ಕಾಶಿಯಲ್ಲಿನ ಕೆಲವು ವಿಚಿತ್ರಗಳು..ವಿಶೇಷಗಳು.


1. ಕಾಶಿಯಲ್ಲಿ ಹದ್ದುಗಳು ಹಾರುವುದಿಲ್ಲ, ಹಸುಗಳು ಗುಮ್ಮುವುದಿಲ್ಲ, ಹಲ್ಲಿಗಳು ಶಬ್ದ ಮಾಡುವುದಿಲ್ಲ, ಶವಗಳಿಂದ ಕೆಟ್ಟ ವಾಸನೆ ಬರುವುದಿಲ್ಲ, ಕಾಶಿಯಲ್ಲಿ ಮರಣ ಹೊಂದಿದ ಪ್ರತಿ ಜೀವಿಯ ಬಲ ಕಿವಿ ಮೇಲಕ್ಕೆ ಎದ್ದಿರುತ್ತದೆ.


2. ಕಾಶಿಯಲ್ಲಿ ಮಂದಿರದ ಸುತ್ತಲೂ ಅನೇಕ ಚಿಕ್ಕ ಪುಟ್ಟ ಸಂದುಗಳು ಇದ್ದು ಅಂತಹ ಸಂದುಗಳು ಅನೇಕ ವಲಯಾಕಾರವಾಗಿ ಸುತ್ತಿದ ಹಾಗೆ ಇದ್ದು ಒಂದು ಪದ್ಮ ವ್ಯೂಹದ ಹಾಗೆ ಹೊಸಬರಿಗೆ ಸುಳಿವು ಸಿಗದ ಹಾಗೆ ಇರುತ್ತದೆ.


3. ಇದಃ ಪೂರ್ವ ಇಲ್ಲಿ ಅನೇಕ ಸುಂದರವಾದ ವನಗಳು, ಹೂವಿನ ಗಿಡಗಳ ಮಧ್ಯ ಇದ್ದ ಮಂದಿರವನ್ನು ವಿದೇಶೀ ದಂಡ ಯಾತ್ರಿಕರ ದಾಳಿಗಳಿಂದ ಕಾಪಾಡುವುದಕ್ಕಾಗಿ ಪ್ರಜೆ ಗಳೆಲ್ಲಾ ಗುಡಿಯ ಸುತ್ತಲೂ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿ ಶತ್ರು ಸೈನಿಕರಿಗೆ ದಾರಿ ಇಲ್ಲದ ಹಾಗೆ ಮಾಡಿದ್ದಾರೆ.


4. ಅನೇಕ ದೇಶಗಳಿಂದ ದೊಡ್ಡ ದೊಡ್ಡ ಶಾಸ್ತ್ರವೇತ್ತರು ಬಂದು ಕಾಶಿಯಲ್ಲಿ ಅನೇಕ ರೀಸರ್ಚ್ಗಳನ್ನು ಮಾಡಿ ಆಶ್ಚರ್ಯ ಪಟ್ಟರು.


5. ಅಸಲು ಈ ಕಾಸ್ಮೋರ್ಸ್ ಎಲ್ಲಿಂದ ಬರುತ್ತಿದೆ ? 


6. ಆಗಿನ ಪೂರ್ವಿಕರು ಶಕ್ತಿ ಚಲನೆ ಇದ್ದ ಕಡೆಗಳಲ್ಲೆಲ್ಲಾ ಮಂದಿರಗಳನ್ನು ನಿರ್ಮಿಸಿದ್ದಾರೆ.


7. ಅಷ್ಟು ಪರಿಜ್ಞಾನ ಆ ಕಾಲದವರಿಗೆ ಎಲ್ಲಿಂದ ಬಂತು ಅಂತ ಆಶ್ಚರ್ಯಕ್ಕೆ ಗುರಿಯಾದರು.


8. ಕಾಶಿ ವಿಶ್ವೇಶ್ವರನಿಗೆ ಶವಭಸ್ಮ ಲೇಪನದಿಂದ ಪೂಜೆ ಪ್ರಾರಂಭಿಸುತ್ತಾರೆ.

 

9. ಕಾಶಿಯಲ್ಲಿನ ಪರಾನ್ನ ಭುಕ್ತೇಶ್ವರನ ದರ್ಶಿಸಿದರೆ ಜೀವಿಗೆ ಪರರ ಅನ್ನ ತಿಂದ ಋಣದಿಂದ ಮುಕ್ತಿ ಲಭಿಸುತ್ತದೆ.


10. ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ ಇರುತ್ತದೆ; ಪಾಪ ಮಾಡಿದರೂ ಕೋಟಿ ಸಂಖ್ಯೆಯಲ್ಲಿ ಪಾಪ ಅಂಟಿಕೊಳ್ಳುತ್ತದೆ.


11. ವಿಶ್ವನಾಥನನ್ನು ಅಭಿಷೇಕಿಸಿದ ನಂತರ ಕೈಯ ರೇಖೆಗಳು ಬದಲಾಗುತ್ತದೆ.


12. ಇಲ್ಲಿನ ಶಕ್ತಿ ಪೀಠ ವಿಶಾಲಾಕ್ಷಿ ಅಮ್ಮನವರು,  ಜಗತ್ತಿನ ಎಲ್ಲರಿಗೂ ಅನ್ನವಿಡುವ ಅನ್ನಪೂರ್ಣ ದೇವಿ ನಿವಾಸ ಸ್ಥಳ ಕಾಶಿ.


13. ಪ್ರಪಂಚದಲ್ಲಿ ಇರುವ ಎಲ್ಲಾ ಭಾಷೆಗಳಿಗೆ ತಾಯಿ ಆಗಿರುವ ಅತೀ ಪ್ರಾಚೀನ ಸಂಸ್ಕ್ರತ ಪೀಠ ಕಾಶಿಯಲ್ಲೇ ಇರುವುದು.


ಕಾಶಿಯಲ್ಲಿ ಗಂಗೆಯ ತೀರದಲ್ಲಿ 84 ಘಾಟ್ ಗಳು ಇದೆ......


ಇದರಲ್ಲಿ ದೇವತೆಗಳು, ಋಷಿಗಳು, ರಾಜರು ಗಳೊಂದಿಗೆ, ಎಷ್ಟೋ ಜನರು ತಮ್ಮ ತಪಃ ಶಕ್ತಿಯಿಂದ ನಿರ್ಮಿಸಿರುವ ಎಷ್ಟೋ ಇದೆ. ಅದರಲ್ಲಿ ಕೆಲವು: 


1. ದಶಾಶ್ವಮೇಧ ಘಾಟ್: 

ಬ್ರಹ್ಮ ದೇವನು 10 ಸಾರಿ ಅಶ್ವಮೇಧ ಯಾಗ ಮಾಡಿರುವುದು ಇಲ್ಲೇ. ಪ್ರತಿದಿನ ಸಾಯಂಕಾಲ ವಿಶೇಷವಾದ ಗಂಗಾ ಹಾರತಿ ನಡೆಯುತ್ತದೆ.


2. ಪ್ರಯಾಗ್ ಘಾಟ್: 

ಇಲ್ಲಿ ಭೂಗರ್ಭದಲ್ಲಿ ಗಂಗೆಯೊಂದಿಗೆ ಯಮುನಾ, ಸರಸ್ವತೀ ನದಿ ಸಂಗಮವಾಗುತ್ತದೆ.


3. ಸೋಮೇಶ್ವರ ಘಾಟ್: 

ಚಂದ್ರನಿಂದ ನಿರ್ಮಿತವಾಗಿದೆ.


4. ಮೀರ್ ಘಾಟ್: 

ಸತೀದೇವಿ ಕಣ್ಣು ಬಿದ್ದ ಸ್ಥಳ. ವಿಶಾಲಾಕ್ಷಿ ದೇವಿ ಶಕ್ತಿ ಪೀಠ.

ಇಲ್ಲೇ ಯಮನು ಪ್ರತಿಷ್ಠಾಪಿಸಿದ ಲಿಂಗ ಇರುತ್ತದೆ.


5. ನೇಪಾಳಿ ಘಾಟ್:

ಪಶುಪತಿನಾಥ್ ಮಂದಿರದ ಬಂಗಾರದ ಕಲಶವನ್ನು ನೇಪಾಳದ ರಾಜ ಕಟ್ಟಿಸಿದ.


6. ಮಣಿ ಕರ್ಣಿಕಾ ಘಾಟ್:

ಇದು ಕಾಶಿಯ ಮೊಟ್ಟ ಮೊದಲನೆಯದು. ಇದನ್ನು ವಿಷ್ಣು ದೇವನು ಸ್ವಯಂ ಸುದರ್ಶನ ಚಕ್ರದಿಂದ ಅಗೆದು ನಿರ್ಮಿಸಿದ. ಇಲ್ಲಿ ಸಕಲ ದೇವತೆಗಳು ಸ್ನಾನ ಮಾಡುತ್ತಾರೆ. ಇಲ್ಲಿ ಗಂಗೆ ನಿರ್ಮಲವಾಗಿ ಹರಿಯುತ್ತಾಳೆ. ಇಲ್ಲಿ ಮಧ್ಯಾಹ್ನ ಸಮಯದಲ್ಲಿ ಯಾರಾದರೂ ಸುಚೇಲ ಸ್ನಾನ ಮಾಡಿದರೆ ಅವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುವುದು. ಜೀವಿಗೆ ಎಷ್ಟು ಪುಣ್ಯ ಪ್ರಾಪ್ತಿಯಾಗುವುದೋ ಚತುರ್ಮುಖ ಬ್ರಹ್ಮ ದೇವನಿಂದಲೂ ಕೂಡ ವರ್ಣಿಸಲು ಆಗುವುದಿಲ್ಲವಂತೆ.


7. ವಿಶ್ವೇಶ್ವರ್ ಘಾಟ್:

ಇವಾಗ ಸಿಂಧಿಯಾ ಘಾಟ್ ಅಂತಾರೆ. ಇಲ್ಲೇ ಅಹಲ್ಯಾ ಬಾಯಿ ತಪಸ್ಸು ಮಾಡಿದ್ದು. ಇಲ್ಲೇ ಸ್ನಾನ ಮಾಡಿ ಬಿಂದು ಮಾಧವನನ್ನು ದರ್ಶಿಸುತ್ತಾರೆ.


8. ಪಂಚ ಗಂಗಾ ಘಾಟ್: 

ಇಲ್ಲೇ ಭೂಗರ್ಭದಿಂದ ಗಂಗೆಯೊಳಗೆ 5 ನದಿಗಳು ಸೇರುತ್ತದೆ.


9. ಗಾಯ್ ಘಾಟ್:

ಗೋ ಪೂಜೆ ನಡೆಯುತ್ತದೆ.


10. ತುಳಸಿ ಘಾಟ್: 

ತುಳಸಿ ದಾಸ್ ಸಾಧನೆ ಮಾಡಿ ರಾಮಚರಿತ ಮಾನಸ್ ಬರೆಯುವಂತೆ ಶಿವನ ಆದೇಶ ಹೊಂದಿದನು.


11. ಹನುಮಾನ್ ಘಾಟ್: 

ಇಲ್ಲಿ ನಡೆಯುವ ರಾಮ ಕಥೆ ಕೇಳಲು ಹನುಮಂತನು ಬರ್ತಾರೆ.ಇಲ್ಲೇ ಸೂರ್ಯನು ತಪಸ್ಸು ಮಾಡಿ ಅನೇಕ ಶಕ್ತಿಗಳನ್ನು ಹೊಂದಿರುವ ಲೋಲಾರ್ಕ್ ಕುಂಡ ಇರುವುದು.ಇಲ್ಲೇ ಶ್ರೀ ವಲ್ಲಭಾಚಾರ್ಯರು ಜನಿಸಿದರು.


12. ಅಸ್ಸಿ ಘಾಟ್: 

ಪೂರ್ವದಲ್ಲಿ ದುರ್ಗಾದೇವಿ ಶುಂಭ, ನಿಶುಂಭ ಎನ್ನುವ ರಾಕ್ಷಸರನ್ನು ಸಂಹರಿಸಿ ದಂತಹ ಖಡ್ಗವನ್ನು ಹಾಕಿದ್ದರಿಂದ ಇಲ್ಲಿ ಒಂದು ತೀರ್ಥ ಉದ್ಭವಿಸಿದೆ.


13. ಹರಿಶ್ಚಂದ್ರ ಘಾಟ್:

ಸರ್ವವನ್ನು ಕಳೆದುಕೊಂಡು ಹರಿಶ್ಚಂದ್ರನು ಇಲ್ಲಿ ಶವ ದಹನ ಕೂಲಿಯಾಗಿ ಕೆಲಸ ಮಾಡಿ ದೈವ ಪರೀಕ್ಷೆಯಲ್ಲಿ ಗೆದ್ದು ತನ್ನ ರಾಜ್ಯವನ್ನು ಹೊಂದಿದನು. ಇಂದಿಗೂ ಇಲ್ಲಿ ನಿತ್ಯ ಚಿತೆ ಉರಿಯುತ್ತಲೇ ಇರುತ್ತದೆ.


14. ಮಾನಸ ಸರೋವರ ಘಾಟ್:

ಇಲ್ಲಿ ಕೈಲಾಸ ಪರ್ವತದಿಂದ ಭೂಗರ್ಭ ಜಲದಾರೆ ಸೇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಕೈಲಾಸ ಪರ್ವತ ಸುತ್ತಿದ ಪುಣ್ಯ ಲಭಿಸುತ್ತದೆ.


15. ನಾರದ ಘಾಟ್:

ನಾರದನು ಲಿಂಗ ಸ್ಥಾಪಿಸಿದ್ದಾನೆ.


16. ಚೌತಸ್ಸಿ ಘಾಟ್: 

ಇಲ್ಲೇ ಸ್ಕಂದ ಪುರಾಣದ ಪ್ರಕಾರ ಇಲ್ಲಿ 64 ಯೋಗಿನಿಯರು ತಪಸ್ಸು ಮಾಡಿದ್ದಾರೆ. ಇದು ದತ್ತಾತ್ರೇಯರಿಗೆ ಪ್ರೀತಿ ಪಾತ್ರ ಸ್ಥಳ... ಇಲ್ಲಿ ಸ್ನಾನ ಮಾಡಿದರೆ ಪಾಪಗಳು ತೊಲಗಿ 64 ಯೋಗಿನಿಯರ ಶಕ್ತಿಗಳು ಪ್ರಾಪ್ತಿಸುತ್ತದೆ.


17. ರಾನಾ ಮಹಲ್ ಘಾಟ್:

ಇಲ್ಲೇ ಪೂರ್ವದಲ್ಲಿ ಬ್ರಹ್ಮ ದೇವನು ಸೃಷ್ಟಿ ಕಾರ್ಯದಲ್ಲಿ ಬರುವ ವಿಘ್ನಗಳನ್ನು ತೊಲಗಿಸುವಂತೆ ವಕ್ರತುಂಡ 

ವಿನಾಯಕನನ್ನು ತಪಸ್ಸು ಮಾಡಿ ಪ್ರಸನ್ನ ಮಾಡಿಕೊಂಡನು.


18. ಅಹಲ್ಯಾ ಬಾಯಿ ಘಾಟ್:

ಈಕೆ ಕಾರಣದಿಂದಾಗಿ ನಾವು ಈ ದಿವಸ ಕಾಶಿ ವಿಶ್ವೇಶ್ವರನ ದರ್ಶನ ಮಾಡುತ್ತಿದ್ದೇವೆ.


🌸🌸🌸🌸🌸🌸🌸🌸🌸🌸🌸🌸🌸


ಕಾಶಿಯಲ್ಲಿ ಗಂಗಾ ನದಿಯ ಪ್ರವಾಹದೊಳಗೆ ಅನೇಕ ಘಾಟ್ಗಳ ಹತ್ತಿರ ಉದ್ಭವಿಸುವ ತೀರ್ಥಗಳು ಸೇರಿಕೊಳ್ಳುತ್ತದೆ.


ಪೂರ್ವ ಕಾಶಿಯಲ್ಲಿ ದೇವತೆಗಳು,ಋಷಿಗಳು,

ರಾಜರೂ ನಿರ್ಮಿಸಿದ ಅನೇಕ ಮಂದಿರಗಳು ಕಟ್ಟಡಗಳು ವನಗಳ ಮಧ್ಯ ವಿಶ್ವನಾಥನ ಮಂದಿರ ಎಷ್ಟೋ ವೈಭವೋಪೇತವಾಗಿ ಬೆಳಗುತ್ತಿತ್ತು.


ಆದರೆ ಮಹಮ್ಮದೀಯ ದಂಡ ಯಾತ್ರಿಕರು ಕಾಶಿಯನ್ನು ಲಕ್ಷ್ಯವಾಗಿ ಮಾಡಿಕೊಂಡು ದಾಳಿಯನ್ನು ಮಾಡಿ ಧ್ವಂಸ ಮಾಡಿದ ನಂತರದ ಕಾಶಿಯನ್ನು ನಾವು ನೋಡುತ್ತಿದ್ದೇವೆ.


ವಿಶ್ವನಾಥ, ಬಿಂದು ಮಾಧವ ರೊಂದಿಗೆ ಎಷ್ಟೋ ಅನೇಕ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಾರೆ.


ಇಂದಿಗೂ ವಿಶ್ವನಾಥ ಮಂದಿರದ ನಂದಿ, ಮಸೀದು ಇರುವ ಕಡೆಯ ಕೆಡವಿದ ಮಂದಿರದ ಕಡೆಗೆ ನೋಡುತ್ತಿದೆ.


ಅಲ್ಲೇ ಶಿವನು ತ್ರಿಶೂಲದಿಂದ ತೋಡಿದ ಜ್ಞಾನವಾಪಿ ತೀರ್ಥ ಬಾವಿ ಇರುತ್ತದೆ.


ಈದಿನ ನಾವು ದರ್ಶಿಸುವ ವಿಶ್ವನಾಥ ಮಂದಿರ ಅಸಲು ಮಂದಿರಕ್ಕೆ ಪಕ್ಕದ ಇಂದೋರ್ ರಾಣಿ ಶ್ರೀ ಅಹಲ್ಯಾ ಬಾಯಿ ಹೋಲ್ಕರ್ ಅವರು ಕಟ್ಟಿಸಿದರು.


🙏🏻🙏🏻🙏🏻 ಕಾಶಿಯ ಸ್ಮರಣೆ ಸದಾ ಮೋಕ್ಷಕಾರಕ🙏🏻🙏🏻🙏🏻🌺🌺🌺 ಶಿವೋಹಂ 🌺🌺🌺

Wednesday 24 August 2022

ಅಪ್ಪನ ಶಕ್ತಿ ಕಡಿಮೆಯಾಗಿದೆ

 *ಅಪ್ಪನ ಶಕ್ತಿ ಕಡಿಮೆಯಾಗಿದೆ😥*

ಕಣ್ಣು ತೆರೆಸುವ ಕಥೆ

ಹಾಗೇ ಸುಮ್ಮನೆ 

ಈ ಕೆಳಗಿನ ಪುಟ್ಟ ಕಥೆಯನ್ನು ಓದಿ,

ಐದಾರು ತಲೆಮಾರುಗಳ ಕುಟುಂಬದ ಕುಡಿಗಳೆಲ್ಲ ಕೂಡಿ ಇರುವ ಆ ಅವಿಭಕ್ತ ಕುಟುಂಬದ ಹಿರಿಯನಿಗೆ 93 ವರ್ಷ.

ಅದೊಂದು ದಿನ ಯಾವುದೋ ಕೌಟುಂಬಿಕ ವಿಷಯದಲ್ಲಿ ಮಾತು ಬೆಳೆದು, ಆ ಹಿರಿಯ ತನ್ನ 69 ವಯಸ್ಸಿನ ಮಗನನ್ನು ಆತನ ಮಕ್ಕಳು, ಮೊಮ್ಮಕ್ಕಳೆದುರೇ ಹೊಡೆದು ಬಿಡುತ್ತಾನೆ. ಆಗ ಮತ್ಯಾರು ಮಾತನಾಡಲು ಅಲ್ಲಿ ಏನೂ ಉಳಿದಿರುವುದಿಲ್ಲ. ಆವರೆಗೆ ಕಂಬಗಳ ಮರೆಯಲ್ಲಿ, ಬಾಗಿಲು ಕಿಟಿಕಿಯ ಹಿಂದೆ ನಿಂತು ನಡೆಯುವುದನ್ನು ಕದ್ದು ನೋಡುತ್ತಿದ್ದ ಹೆಂಗಸರು, ಚಿಕ್ಕವರೆಲ್ಲಾ ಒಳಗೆ ಸರಿದು ಬಿಡುತ್ತಾರೆ.

ಆ ರಾತ್ರಿ ತುಂಬಿದ ಇಡೀ ಮನೆಯಲ್ಲಿ ಮೌನ ಆವರಿಸಿದೆ. ಆ ಎರಡು ರೂಮಿನಲ್ಲಿರುವವರನ್ನು ಬಿಟ್ಟು.

ಹಿರಿಯನಿಗೆ ನಿದ್ದೆ ಬರುತ್ತಿಲ್ಲ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಆಗಾಗ ಮಗ್ಗಲು ಬದಲಿಸುತ್ತಿರುತ್ತಾನೆ. ಪಕ್ಕದಲ್ಲಿರುವ ಅಜ್ಜಿಗೆ ಯಜಮಾನ ಯಾವುದೋ ಚಿಂತೆಯಲ್ಲಿದ್ದಾನೆಂದು ಅನುಭವದಿಂದ ಗೊತ್ತಾಗುತ್ತಿದೆ, ಆದರೆ ಕೇಳಲು ಭಯ. ಕೊನೆಗೆ..

"ಯಾಕ್ರಿ? ನಿದ್ದಿ ಬರ್ತಿಲ್ಲೇನು? ನೀರೇನಾದ್ರೂ ಕೊಡ್ಲಾ?" ಕೇಳುತ್ತಾಳೆ..

"ಬ್ಯಾಡ" ಎಂದಷ್ಟೇ ಹೇಳಿ, ಸ್ವಲ್ಪ ಸಮಯದ ನಂತರ 

"ಆವಾಗ ನಿನ್ನ ಮಗನ ಮುಖ ನೋಡ್ದೇನು?" ಎನ್ನುತ್ತಾನೆ.

"ಹುಂ.." ಎಂದಷ್ಟೇ ಹೇಳುತ್ತಾಳೆ ಅಜ್ಜಿ..

"ಮೊದಲೆಲ್ಲಾ ಹೊಡದಾಗ ಅವ್ನ ಕಣ್ಣಾಗ ನೀರು ಬರ್ತಿರ್ಲಿಲ್ಲ, ಇವತ್ತು ಕಣ್ತುಂಬ ನೀರು ತುಂಬಿಕೊಂಡಿದ್ದ" ಅಂದ ಹಿರಿಯ, ಅದನ್ನಾಕೆಯೂ ಗಮನಿಸಿದ್ಲು..

"ನಾ ಜೋರಾಗಿ ಹೊಡ್ದನೇನೋ?, ಪೆಟ್ಟು ಜೋರಾಗಿ ಬಿತ್ತೇನೋ?" ಎಂದು ನೊಂದು ಕೊಂಡಿದ್ದ..

ಇನ್ನೊಂದು ರೂಮಿನಲ್ಲಿದ್ದ ಮಗನಿಗೂ ನಿದ್ದೆ ಬರುತ್ತಿಲ್ಲ. ಆತನಿಗೆ ನಿದ್ದೆ ಬರದೇ ಆತನ ಹೆಂಡತಿಗೂ ನಿದ್ದೆಯಿರಲಿಲ್ಲ. 

"ಮೊದ್ಲ್ಯಾವಾಗ್ಲೂ ಇಷ್ಟು ಮನಸಿಗೆ ಹಚ್ಗೊಳ್ಲಾರ್ದೊರು ಇವತ್ಯಾಕ ಬಾಳ ಬ್ಯಾಸರ ಮಾಡ್ಕೊಂಡೇರಿ?" ಎಂದು ಹೇಳುತ್ತಾ... "ದೊಡ್ಡೋರು ಮೊದ್ಲು ಎಷ್ಟು ಸಲ ಹೊಡದ್ರೂ ನಿಮ್ ಕಣ್ಣಾಗ ನೀರ ಬಂದಿದ್ದಿಲ್ಲ?" ಕಳಕಳಿಯಿಂದ ಕೇಳಿದಳು..

"ಅಪ್ಪ, ಹಿಂದಿನ ಸಲ ಹೊಡ್ದಾಗ ಪೆಟ್ಟು ಜೋರಾಗಿತ್ತು. ಈ ಸಲ ಹೊಡ್ದಂಗೆ ಅನ್ಸಲಿಲ್ಲ, ನಮ್ಮಪ್ಪನ ಕೈಯಾಗ ಶಕ್ತಿ ಕಡಿಮಿ ಆಗೇದ" ನೋವಿನಿಂದ ಹೇಳಿದಾತ.

"ಅಪ್ಪನ್ನ ಕಳ್ಕೊಂಡ್ರ ನಾವು ಪರದೇಶಿ ಆದಂಗಾಗ್ತೇವಿ, ಇನ್ಮ್ಯಾಲೆ ಅಪ್ಪನ್ನ ಇನ್ನೂ ಕಾಳಜಿಲಿಂದ ನೋಡ್ಕೋಬೇಕು" ಅಂದ..

- - - - - - - - - - - - - - - - - - - - - -

ಇಂಥಾ ಪವಿತ್ರ ಸಂಬಂಧಗಳು ಈಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಕಳೆದುಕೊಂಡ ಮೇಲೆಯೇ ನಿಜವಾದ ಮೌಲ್ಯ ಗೊತ್ತಾಗೋದು, ಅಲ್ಲವೇ?

ಒಂದಿಷ್ಟು ಸಹನೆ, ಒಂಚೂರು ತ್ಯಾಗ ಬುದ್ಧಿ, ಸ್ವಲ್ಪ ಹೆಚ್ಚು ಪ್ರೀತಿ, .... ಎಂಥಾ ಪವಾಡ ಸೃಷ್ಟಿಸಬಲ್ಲವು, ಯೋಚಿಸಿ ನೋಡಿ. ಹೌದು, ನಾವು ಬದಲಾಗೋಣ.


Courtsey: Whatsapp

ತಂದೆಗೆ ಮಗನ ಉಡುಗೊರೆ

💐 *ತಂದೆಗೆ ಮಗನ ಉಡುಗೊರೆ*💐 

ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ. 


ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ. ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು. 

ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ.


 ಮಕ್ಕಳಿಗೆ ಫೋನಾಯಿಸುತ್ತಾರೆ "ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ" ಎಂದು.


 ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ.


ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ "ನಿಮಗೊಂದು ವಿಷಯ ತಿಳಿಸಬೇಕಿದೆ "ಎಂದು. 


"ನನ್ನ ನಿವೃತ್ತಿಯಾಗಿದೆ. ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ. ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್  ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ. ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು" ಇಚ್ಛೆ ವ್ಯಕ್ತಪಡಿಸುತ್ತಾರೆ. 


 ಅದಕ್ಕೆ ಮಕ್ಕಳು ಹೇಳುತ್ತಾರೆ 

"ಮೊದಲ ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ"ಎಂದು ಹೇಳುತ್ತಾರೆ, 


ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ. 


ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ. ಆಗ ನೆಟ್ಟ ಸಸಿಗಳು ಮರಗಳಾಗಿವೆ. ತೆಂಗಿನ ಮರ ತುಂಬಾ ಕಾಯಿಗಳಿವೆ. ಎತ್ತ ನೋಡಿದರು ಹಸಿರು ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ 

ಮಗನ ಕೈ ಗೆ ಇಡುತ್ತಾನೆ. ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು,  ಎಲ್ಲವೂ ನಿಗೂಢವೇ... 


ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ... 


ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ "ಅಪ್ಪ.... ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು .ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ. ವರ್ಗಾವಣೆಗಳಿಂದ ಬಸವಳಿದಿದ್ದೀರಿ

ಸಾಕು ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು ನಿಮ್ಮ 

ಪಿ ಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ ,ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ .ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ.

ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ .ಮೊಮ್ಮಕ್ಕಳನ್ನು ಓದಿಸಿ ಕೆಲಸಕ್ಕೆಂದು ಆಳು ಇದ್ದಾನೆ. ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ .ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ. ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ. ಎಂದು ಹೇಳುವಷ್ಟರಲ್ಲಿ 

ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ

ಬಿಟ್ಟರು. ಪ್ರತಿಯೊಬ್ಬ ಮಕ್ಕಳು ಇದೇ ತರಹ ನಡೆದುಕೊಂಡರೆ ಸಮಾಜದಲ್ಲಿ ವ್ರದ್ಧಾಶ್ರಮಗಳ ಅಗತ್ಯತೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬ ಪಾಲಕರು ಸಂತೋಷದಿಂದ ಜೀವನ ನಡೆಸಬಹುದು. ಇಂತಹ ಉತ್ತಮ ಮಾರ್ಗದಲ್ಲಿ ನಾವು - ನೀವು ಸಾಗೋಣ. 


*ಮಕ್ಕಳೆಂದರೆ ಹೀಗಿರಬೇಕು .....*👏🏻👏🏻☝🏻

Courtesy: WhatsApp

Nitya Satya 2

 ಬಿದಿರೊಂದು ಭ್ರಹ್ಮದೇವನಿಗೆ ಎದುರಾಗಿ ಕೇಳಿತಂತೆ "ಬೇಕಿತ್ತೆ ನಿನಗೆ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಹಣ್ಣಿಲ್ಲ, 

ನಿತ್ಯ ಸತ್ಯ ೨

ದಣಿದು ಬಂದವರಿಗೆ ನೆರಳು ಕೂಡ ನೀಡಲಾಗುವುದಿಲ್ಲ".

ಅದಕ್ಕೆ ಬ್ರಹ್ಮದೇವ ನಕ್ಕು ನುಡಿದನಂತೆ, "ಯಾಕೆ ಸಾಧ್ಯವಿಲ್ಲ? ಮನಸ್ಸು ಮಾಡಿ ನೋಡೊಮ್ಮೆ"

ಬಿದಿರು ಹಠ ಹಿಡಿದು ಬೆಳೆಯಿತಂತೆ, ಕೃಷ್ಣನ ಕೈಯ್ಯಲ್ಲಿನ ಕೊಳಲಾಯಿತಂತೆ...., ಮಕ್ಕಳ ತೂಗುವ ತೊಟ್ಟಿಲಾಯಿತಂತೆ...

ಸುಮಂಗಲಿಯರಿಗೆ ಬಾಗಿನ ಕೊಡುವ ಮರವಾಯಿತಂತೆ...., ಬಡವನ ಗುಡಿಸಲಿಗೆ ನೆರಳಾಯಿತಂತೆ.... ಬಟ್ಟೆ ಒಣಗಿಸುವ ಕೋಲಾಯಿತಂತೆ...., ಬಿದಿರಿನ ಬುಟ್ಟಿ ಆಯಿತಂತೆ....,

ಕಡೆಗೆ ಶವ ಎತ್ತಲೂ ಆಧಾರವಾಯಿತಂತೆ....

ಮನುಷ್ಯನಿಗೆ ಗುಟ್ಟು ಹೇಳಿತಂತೆ, "ನನ್ನಿಂದೇನಾಗದು ಅಂತ ಕೈ ಚೆಲ್ಲದಿರು ಮನುಜ, ಮನಸ್ಸು ಮಾಡಿ ನೋಡೊಮ್ಮೆ ಅಂತಾ"...

🙏🏻

Courtesy: WhatsApp

ನಿಮ್ಮಆಲೋಚನಾಶಕ್ತಿಯೇ ನಿಮ್ಮಸಂಪತ್ತು

 #ನಿಮ್ಮಆಲೋಚನಾಶಕ್ತಿಯೇನಿಮ್ಮಸಂಪತ್ತು

 (ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ)

ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?

 ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ..

ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.

ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.

ಬೇರೆಯೊಬ್ಬ ಹೇಳಿದ - ನಾನು  ಚಾಕೊಲೇಟ್ಗಳನ್ನು ಖರೀದಿಸುತ್ತೇನೆ.


...ಆದರೆ..

 

ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ?

ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!!

ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು?

ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ  ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!

 ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದು..ಅವರತ್ರ ಹೇಳು... ನೀನು ನಿನಗಾಗಿ ಏನನ್ನೂ ಖರೀದಿಸಬೇಕಲ್ಲವೇ ಈ 100ರೂಪಾಯಿಯಲ್ಲಿ?


 ಮಗು ನೀಡಿದ ಉತ್ತರದಿಂದ ಶಿಕ್ಷಕರ ಕಣ್ಣು ತುಂಬಿಬಂತು..


 ಮಗು ಹೇಳಿತು - ನನ್ನ ತಂದೆ ಈಗ ಈ ಜಗತ್ತಿನಲ್ಲಿಲ್ಲ

 ನನ್ನ ತಾಯಿಯೇ ನನಗೆ ಎಲ್ಲ.....ನನ್ನ ತಾಯಿ ಊರ ಜನರ ಬಟ್ಟೆ ಹೊಲಿದು...ಬರುವ ಸಂಪಾದನೆಯಿಂದ..ನನಗೆ ಊಟ.. ನನಗೆ ಬಟ್ಟೆ...ಶಾಲೆಗೆ ಹೋಗಲು ಪುಸ್ತಕ ..ಪೆನ್ನು...ಕೊಡಿಸುತ್ತಳೇ....ಕೆಲವು ತಿಂಗಳುಗಳಿಂದ ಅವಳು ದೃಷ್ಟಿ ಹೀನತೆಯಿಂದ ಬಟ್ಟೆಯನ್ನು ಸರಿಯಾಗಿ ಹೊಲಿಯಲು ಪರದಡುತ್ತ ಇದ್ದಾಳೆ, ಅದಕ್ಕಾಗಿಯೇ ನಾನು ನನ್ನ ತಾಯಿಗೆ ಕನ್ನಡಕವನ್ನು ನೀಡುತ್ತೇನೆ....ಯಾಕ್ ಅಂದ್ರೆ...ನನ್ ಕೊಡಿಸುವ ಕನ್ನಡಕ್ಕದಿಂದ.... ನನ್ನ ತಾಯಿ... ನನ್ನನು ಚೆನ್ನಾಗಿ ಓದಿಸುತ್ತಳೇ ಅನ್ನೋ ನಂಬಿಕೆಯಿಂದ...ಮತ್ತು...ನನ್ನ ತಾಯಿಯ.ಸಹಾಯದಿಂದ....ನಾನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿ ಆದ್ರೂ ಆಗಬಹುದು.


 ಶಿಕ್ಷಕ -ಶಭಾಷ್ ಪುಟ್ಟ....ನಿನ್ನ ಆಲೋಚನೆಯೇ ನಿನ್ನ ಸಂಪಾದನೆ!  ತಗೋ ಈ 100 ರೂ. ನನ್ನ ಕೊಟ್ಟ ಭರವಸೆಯ ಮಾತಿನಂತೆ ಮತ್ತು ನಾನು ಇನ್ನು ಈ 200 ರೂ.ಗಳನ್ನು ಸಾಲವಾಗಿ ನೀಡುತ್ತಿದ್ದೇನೆ.  ನೀನು ದೊಡ್ಡ ವ್ಯಕಿಯಾಗಿ ಹಣ ಗಳಿಸಿದಾಗ ,ಆ 200ನ್ನು ಹಿಂತಿರುಗಿಸು....ನೀನು ಅಂತಹ ದೊಡ್ಡ ಮನುಷ್ಯನಾಗಬೇಕೆಂದು ನಾನು ಬಯಸುತ್ತೇನೆ...ಎನ್ನುತ್ತಾ....ಆ ವಿದ್ಯಾರ್ಥಿಯ ತಲೆಯ ಮೇಲೆ  ಕೈಯನ್ನು ಇಟ್ಟು ಆಶೀರ್ವದಿಸಿಸುತ್ತ 300 ಕೊಟ್ಟರು.


30 ವರ್ಷಗಳ ನಂತರ...........


 ಹೊರಗೆ ಮಳೆ ಬರುತ್ತಿದೆ, ಒಳಗೆ ತರಗತಿ ನಡೆಯುತ್ತಿದೆ!...ಅದೇ ಶಿಕ್ಷಕರು ಇನ್ನು ತನ್ನ ನಿವೃತ್ತಿಯ ಕಡೆಯ 3ತಿಂಗಳು ಎದುರುನೋಡುತ್ತ...ಯೋಚಿಸುತ್ತ...ಪಾಠ ಮಾಡುತ್ತಿದ್ದರು


 ಏಕಾಏಕಿ ಶಾಲೆಯ ಮುಂದೆ ಜಿಲ್ಲಾಧಿಕಾರಿಗಳ ಕೆಂಪು ಬಣ್ಣದ ದೀಪಾದ ಸೈರನ್ ಬತ್ತಿಯ ವಾಹನ ಬಂದು ನಿಂತಿತ್ತು..... ಶಾಲಾ ಸಿಬ್ಬಂದಿ ಅಲರ್ಟ್ ಆದರು....


 ಶಾಲೆಯಲ್ಲಿ ಮೌನ!

ಆದರೆ ಇದು ಏನು?


 ಜಿಲ್ಲಾಧಿಕಾರಿಯೊಬ್ಬರು ಮುದುಕ ಶಿಕ್ಷಕರ ಕಾಲಿಗೆ ಬಿದ್ದು ಹೇಳುತ್ತಾರೆ - ಸಾರ್, ನಾನು ಸಾಲವಾಗಿ ಪಡೆದ 200 ರೂಪಾಯಿಯನ್ನು ಹಿಂದಿರುಗಿಸಲು ಬಂದಿದ್ದೇನೆ!


 ಇಡೀ ಶಾಲೆಯ ಸಿಬ್ಬಂದಿ ಬೆಚ್ಚಿಬಿದ್ದರು!


 ಆ ವಯಸ್ಸಾದ ಶಿಕ್ಷಕ...ಕಾಲಿಗೆ ಬೀಳಲು ಬಾಗುತ್ತಿರುವ ಆ  ಯುವಕನ್ನು ಗುರುತಿಸಿ ಮೇಲೆ ಎತ್ತುತ್ತಾನೆ,ಅಪ್ಪಿಕೊಂಡು ತೋಳುಗಳಲ್ಲಿ ಅಳುತ್ತಾ ಹೇಳುತ್ತಾನೆ....ನನ್ನ ಶಿಕ್ಷಕ ವೃತ್ತಿ ಸಾರ್ಥಕವಾಯಿತು...✍️

 

ಕಾಲ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ..ಚಕ್ರವರ್ತಿಯ ಮಗ ಫಕೀರನಾಗುತ್ತಾನೆ, ಮತ್ತು ಫಕೀರನ ಮಗ ಚಕ್ರವರ್ತಿಯಾಗುತ್ತಾನೆ.....ಒಳ್ಳೆಯ ಗುರು...ಒಳ್ಳೆಯ ಗುರಿ ಇರಬೇಕು ಅಷ್ಟೇ.....


Whatsapp Courtesy

Nitya Satya- 1

 ನಿತ್ಯಸತ್ಯ -  ೧


ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? 


ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨


ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ .


ಅವು 

೧) *ಮಲಿನ ಷೋಡಶ* 

೨) *ಮಧ್ಯಮ ಷೋಡಶ* 

೩) *ಉತ್ತಮ ಷೋಡಶ*

 ಎಂಬುದಾಗಿ ಮೂರು ವಿಭಾಗಗಳು .


*ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|*

*ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||*


ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ *ಮಲಿನ ಷೋಡಶ* ಎಂದು ಹೆಸರು .


*ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|*

*ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||*

*ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|*

*ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||*

*ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|*

*ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||*

*ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|*

*ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||*

*ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|*

*ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||*

ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು *ಮಧ್ಯಮ ಷೋಡಶ* ಎನಿಸಿಕೊಳ್ಳುವವು .


*ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |*

*ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||*

*ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|*

*ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||*


ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . 


ಇವುಗಳು *ಉತ್ತಮ ಷೋಡಶ* ಎಂದು ಕರೆಸಿಕೊಳ್ಳುವವು .


ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ *ಸೌಮ್ಯ* ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ *ಉತ್ತಮ ಷೋಡಶ* ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . 


ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .


 ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .


ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ *ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ .......* ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . 


ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,


 ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .


ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ  ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ 


ಕೃಪೆ ವಾಟ್ಸಪ್ಪ್

Tuesday 23 August 2022

Tech Thoughts: How to upgrade Git on Windows to the latest version

Tech Thoughts: How to upgrade Git on Windows to the latest version: Upgrading Git on Windows is a simple process that can be accomplished in a few minutes. You shouldn't need to take any special action to...

Thursday 18 August 2022

Pradosha nirnaya

 


About Lord Krishna

 ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ.


1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ.

2)ಜನ್ಮ ದಿನಾಂಕ ಜುಲೈ 19 ಕ್ರಿಪೂ 3228

3) ತಿಂಗಳು : ಶ್ರಾವಣ

4) ದಿನ :  ಅಷ್ಟಮಿ

5) ನಕ್ಷತ್ರ : ರೋಹಿಣಿ

6) ದಿನ  : ಬುಧವಾರ

7) ಸಮಯ : 00:00 A.M.


8)  ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ.

9)  ಮರಣ ದಿನ 18 ಫೆಬ್ರವರಿ ಕ್ರಿಪೂ 3102 

10) ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು.

11) ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು.

12)  ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.

13) ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ  ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.

14) ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2 ರಂದು ತೀರಿಕೊಂಡರು(  ಉತ್ತರಾಯಣದ ಮೊದಲ ಏಕಾದಶಿ)


15) ಶ್ರೀ ಕೃಷ್ಣನನ್ನು

(a) ಮಥುರಾದಲ್ಲಿ ಕನ್ನಯ್ಯಾ

(b) ಓಡಿಸ್ಸಾದಲ್ಲಿ ಜಗನ್ನಾಥ

(c) ಮಹಾರಾಷ್ಟ್ರದಲ್ಲಿ ವಿಠಲ

(d) ರಾಜಸ್ತಾನದಲ್ಲಿ ಶ್ರೀನಾಥ

(e) ಗುಜರಾತಲ್ಲಿ ದ್ವಾರಕಾಧಿಶ್

(f) ಉಡುಪಿಯಲ್ಲಿ ಕೃಷ್ಣ

(g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.


16) ಕೃಷ್ಣ ನ ತಂದೆ : ವಸುದೇವ

17) ತಾಯಿ : ದೇವಕಿ

18) ಸಾಕು ತಂದೆ :ನಂದ

19) ಸಾಕುತಾಯಿ : ಯಶೋದೆ

20 ಹಿರಿಯಣ್ಣ: ಬಲರಾಮ

21) ತಂಗಿ : ಸುಭದ್ರೆ

22) ಜನ್ಮ ಸ್ಥಳ :ಮಥುರಾ

23) ಪತ್ನಿಯರು :ರುಕ್ಮಿಣೀ, ಸತ್ಯಭಾಮ.....

24) ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ.

(i) ಚನೋರ

(ii) ಕಂಸ

(iii) ಶಿಶುಪಾಲ

(iv)ದಂಟವಕ್ರ


25) ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ.

26) ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕನ್ನಾ ಎಂದು ಕರೆಯುತ್ತಿದ್ದರು.

27) ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ.

28) ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ. ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ.

29) ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ.

30)  ಮುಂದಿನ ದಿನದಲ್ಲಿ ಸಿಂಧೂ ರಾಜ ಕಲಯಾವನನ ಬೆದರಿಕೆಗೆ ಈತ ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದ.

31)ವೈನಾತೆಯ ಎಂಬ ಗಿರಿಜನರ(ಈಗಿನ ಗೋವಾ) ಸಹಾಯದಿಂದ ಈತ ಜಾರಾಸಂಧಾನನ್ನು ಸೋಲಿಸಿದ್ದ.

32) ಅಳಿದು ಹೋಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣ ಮತ್ತೆ ಕಟ್ಟಿದ.

33)  ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದ ಈತ ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ.

34)ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಈತನಿಗೆ ತಿಳಿಯುತ್ತದೆ.ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಸುತ್ತಾನೆ.

35) ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು  ಪಾಂಡವರಿಗೆ ಸಹಾಯ ಮಾಡುತ್ತಾನೆ.

36) ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ.


37) ಪಾಂಡವರ ಗಡಿಪಾರಿನ ಸಮದಲ್ಲಿ ಪಾಂಡವರ ಪರವಾಗಿ ನಿಲ್ಲುತ್ತಾನೆ.

38) ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುವಂತೆ ಮಾಡುತ್ತಾನೆ.

39) ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡಿ, ಧರ್ಮದ ರಕ್ಷಣೆ ಮಾಡುತ್ತಾನೆ.

40) ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸಿದ ಮಹಾನ್ ಸಾಲುಗಳೇ "ಭಗವದ್ಗೀತೆ"

41) ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುದನ್ನು ಆತ ನೋಡಬೇಕಾಯಿತು.

42)   ಜಾರಾ ಎನ್ನುವ ಬೇಟೆಗಾರನಿಂದ ಕೊನೆಗೆ ಶ್ರೀ ಕೃಷ್ಣನ ಹತ್ಯೆಯಾಯಿತು.

43)  ಜೀವನದಲ್ಲಿ ಏನೂ ಜಾದೂ ಮಾಡದ ಸಾಮಾನ್ಯ ವ್ಯಕ್ತಿತ್ವ ಈತನದ್ದು. ಆತನ ಜೀವನ ಅತ್ಯಂತ ಕಠಿಣವಾಗಿತ್ತು ಮತ್ತು ಪ್ರತಿಕ್ಷಣವೂ  ಹೊಸ ಸವಾಲುಗಳಿಂದ ಕೂಡಿತ್ತು. ಯಾವತ್ತಿಗೂ ತನ್ನ ನೋವನ್ನು ಹೊರಹಾಕದೆ ಸದಾ ತಾಳ್ಮೆಯಿಂದ ಮುಗಳ್ನಗುತ್ತಿದ್ದ ವ್ಯಕ್ತಿತ್ವ ಕೃಷ್ಣನದ್ದು.


44) ಸವಾಲುಗಳನ್ನು ತನ್ನ ಚತುರ ಬುದ್ಧಿವಂತಿಕೆಯಿಂದ ಕೃಷ್ಣ ಎದುರಿಸುತ್ತಾ ಮುಂದುವರೆಯುತ್ತಾನೆ.

45) ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಭವಿಷ್ಯವನ್ನುಅರಿಯುವ ವಿಶೇಷವಾದ ದೈವಿಶಕ್ತಿಯಿತ್ತು.

46) ಇನ್ನೊಬ್ಬರ ಮನಸ್ಸನ್ನು ಮುಖ ನೋಡಿ ಅರ್ಥಮಾಡಿಕೊಳ್ಳಬಲ್ಲ ವಿಶೇಷವಾದ ಮನೋಶಾಸ್ತ್ರಜ್ಞ ಕೂಡ ಈತನಾಗಿದ್ದ.

47) ಈತನ ಜೀವನ ಈತನ ಸಂದೇಶ ನಿಜಕ್ಕೂ ನಮಗೆಲ್ಲಾ ದಾರಿದೀಪ.


(ಇಂಗ್ಲೀಷಲ್ಲಿದ್ದ ಈ ಮಾಹಿತಿಯನ್ನು ಕನ್ನಡನುವಾದ ನಾನು ಮಾಡಿದೆ ಅಷ್ಟೇ, ಇಷ್ಟು ನಿಖರವಾದ ಮಾಹಿತಿಯನ್ನು ಕಲೆಹಾಕಿ ಬರೆದ ಆ ಪುಣ್ಯಾತ್ಮರಿಗೊಂದು ಶರಣು)


ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...


In English :


Unique information about Lord Sri Krishna.


1) Krishna was born 5253 years ago.

2)Date of birth July 19th 3228 BC

3) Month : Shravan

4) Day : Ashtami

5) Star : Rohini

6) Day : Wednesday

7) Time : 00:00 A.M.


8) Shri Krishna lived for 126 years 8 months 7 days.

9) Date of death 18 February 3102 BC

10) Kurukshetra war took place when Krishna was 89 years old.

11) Krishna died after 36 years of Kurukshetra war.

12) Kurukshetra war started on Mrigashira Shukla Ekadashi 3139 AD (8 December). The war ended on December 25, 3139 BC.

13) Due to the death of Jayadratha there was a solar eclipse on 21 December 3139 from 3 to 5 pm.

14) Bhishma died on 2 February 3138 AD (first Ekadashi of Uttarayana).


15) Shri Krishna

(a) Kannayya at Mathura

(b) Jagannath in Odisha

(c) Vithala in Maharashtra

(d) Srinath in Rajasthan

(e) Dwarkadhish in Gujarat

(f) Krishna in Udupi

(g) Worshiped with names like Guruvayurappa in Kerala.


16) Father of Krishna: Vasudeva

17) Mother : Devaki

18) Foster father : Nanda

19) Foster mother : Yashode

20 Hirianna: Balarama

21) Sister : Subhadre

22) Place of Birth : Mathura

23) Wives: Rukmini, Satyabhama.....

24) Krishna killed only 4 people in his lifetime.

(i) Chanora

(ii) Income

(iii) Shishupala

(iv) Dantavakra


25) His mother belonged to the Ugra clan, while his father belonged to the Yadava clan.

26) Born black, Krishna was called Kanna by his Gokula village.

27) Krishna came to Vrindavan from Gokula in his 9th year due to wild beasts.

28) Krishna, who spent his 10 years and 8 months in Vrindavan, killed his father-in-law Kamsa in Mathura when he was 10 years old. On the next day he left his parents and came to Mathura.

29) From there he never returned to Vrindavan again.

30) On the next day he left Mathura and came to Dwarka under the threat of King Kalayavan of Sindhu.

31) He defeated Jarasandha with the help of tribesmen (now Goa) called Vainathe.

32) Lord Krishna rebuilt the city of Dwaraka which had become extinct.

33) From there he came to Sandipani Ashram and started his studies in his 18th year.

34) After studying, he comes to know about the tragedy of the Pandavas. He marries Draupadi to the Pandavas.

35) Indraprastha helps the Pandavas to build the capital.

36) Protects Draupadi's human.


37) Stands for the Pandavas during their exile.

38) Makes the Pandavas victorious in Kurukshetra war.

39) Works as Arjuna's charioteer in Kurukshetra, protects religion.

40) "Bhagavad Gita" is the great lines that Lord Krishna preached to Arjuna in the land of war.

41) The next day he had to see the city wall he built sink.

42) Lord Krishna was finally killed by a hunter named Jara.

43) He has a normal personality that does nothing magical in life. His life was very difficult and every moment was full of new challenges. Krishna's personality is that of always smiling patiently without letting go of his pain.


44) Krishna continues to face challenges with his ingenious wisdom.

45) Krishna was well aware of past and future. He had a special divine power to know the future.

46) He was also a special psychologist who could understand the mind of another by looking at his face.

47) His life and his message are indeed a beacon for us all.


(This information in English was done by me, a Kannada person, I surrender to those saints who compiled such accurate information)


Happy Sri Krishna Janmashtami to all...

Tech Thoughts: Integrating QR/Bar code Scanner to Android Applica...

Tech Thoughts: Integrating QR/Bar code Scanner to Android Applica...: Greetings of the Day!!! While we were working on a project to develop an android app, we had a requirement to integrate a QR or bar code ...

Tech Thoughts: How to check Gurubala by seeing Kundali

Tech Thoughts: How to check Gurubala by seeing Kundali: In Hindu tradition, we check Gurubala for most of the occasions like Marriage, Upanayana, etc.  Gurubala is mainly the effect of GuruGruha o...